ತೋಟ ತೊಳಿಲಾಲರ್ ಸಂಘದ ಮಹಾಸಭೆ

0

ಫೆಡರೇಶನ್‌ನಿಂದ ಹೊರಬರಲು ನಿರ್ಧಾರ

ತೋಟ ತೊಳಿಲಾಲರ್ ಸಂಘದ ಮಹಾಸಭೆಯು ಜು. ೨ರಂದು ಐವರ್ನಾಡಿನ ಪಂಚಾಯತ್ ಸಭಾಭವನದಲ್ಲಿ ನಡೆದು, ಕೆಎಫ್‌ಡಿಸಿ ವರ್ಕರ್‍ಸ್ ಫೆಡರೇಶನ್ ಎಂಬ ಕಾರ್ಮಿಕ ಸಂಘಗಳ ಒಕ್ಕೂಟದಿಂದ ಚಂದ್ರಲಿಂಗಂರವರ ಅಧ್ಯಕ್ಷತೆಯ ತೋಟ ತೊಳಿಲಾಲರ್ ಸಂಘವು ಹೊರಬರಲು ತೀರ್ಮಾನಿಸಿದೆ. ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಚಂದ್ರಲಿಂಗಂ ಬೇಂಗಮಲೆ, ಕಾರ್ಯಾಧ್ಯಕ್ಷರಾಗಿ ಸೂರ್ಯಕುಮಾರ್ ಬೇಂಗಮಲೆ, ಉಪಾಧ್ಯಕ್ಷರಾಗಿ ಕಂದಸ್ವಾಮಿ ದರ್ಖಾಸ್ತು, ರಾಜಶೇಖರ್ ಬಾರ್ಪಣೆ, ಚಂದ್ರಶೇಖರ್ ನಿಡುಬೆ, ಮಣಿಕಂಠ ಕಲ್ಲೋಣಿ, ಪ್ರಧಾನ ಕಾರ್ಯದರ್ಶಿಯಾಗಿ ರಾಜಕೃಷ್ಣ ಬಿಳಿನೆಲೆ, ಸಂಘಟನಾ ಕಾರ್ಯದರ್ಶಿಯಾಗಿ ಚಂದ್ರನ್ ಕೂಟೇಲು, ಕೋಶಾಧಿಕಾರಿಯಾಗಿ ರಾಮಚಂದ್ರನ್ ಕೂಟೇಲು, ಕಾರ್ಯದರ್ಶಿಯಾಗಿ ರಾಜಕುಮಾರ್ ನಾಗಪಟ್ಟಣ, ಕಮಲ್‌ರಾಜ್ ನಾಗಪಟ್ಟಣ, ಶಿವ ಕೊಂಬಾರ್, ಸೆಂದಿಲ್ ಕುಮಾರ್ ಕೊಂಬಾರು, ಜೊತೆ ಕಾರ್ಯದರ್ಶಿಗಳಾಗಿ ವಿಘ್ನೇಶ್ವರ ಕಂದಡ್ಕ, ಅರುಣಾಚಲಂ ಕೂಟೇಲು, ರವಿರಾಜ್ ನಾಗಪಟ್ಟಣ, ಮೂರ್ತಿ ಜಬಳೆ, ಎಂ.ಎಸ್. ಕುಮಾರ್ ನಾಗಪಟ್ಟಣ ಆಯ್ಕೆಯಾದರು.