ಮರಕತ ಕಿಂಡಿ ಅಣೆಕಟ್ಟುನಲ್ಲಿ ತುಂಬಿದ ಮರಗಳ ತೆರವುಗೊಳಿಸಿದ ವಿಪತ್ತು ನಿರ್ವಹಣಾ ಸ್ವಯಂಸೇವಕರು

0

ಏನೆಕಲ್ಲು ಗ್ರಾಮದ ಮರಕತ ಎಂಬಲ್ಲಿ ಕಿಂಡಿ ಅಣೆಕಟ್ಟಿ ನಲ್ಲಿ ವಿಪರೀತ ಮಳೆಯಿಂದ ಬಾರಿ ಗಾತ್ರದ ಮರಗಳು ತುಂಬಿದ್ದು ಮುಂದೆ ಅಪಾಯದ ಸೂಚನೆ ನೀಡುತಿತ್ತು. ಇದನ್ನು ಮನಗಂಡ ನಾಲ್ಕೂರು ಶೌರ್ಯ ಶ್ರೀ ವಿಪತ್ತು ನಿರ್ವಹಣಾ ತಂಡದ ಸ್ವಯಂಸೇವಕರು ಜೂ.9ರಂದು ಅದನ್ನು ತೆರವು ಗೊಳಿಸಿದರು.

ಸೇವಾಕಾರ್ಯದಲ್ಲಿ ಮರಕತ ದೇವಸ್ಥಾನ ಆಡಳಿತ ಸಮಿತಿಯ ಚಂದ್ರಶೇಖರ ಬಾಳುಗೊಡು. ಮೋಹನಾಂಗಿ ಉದೇರಿ. ದಯಾನಂದ ಉದೇರಿ, ಅರಣ್ಯ ಇಲಾಖೆಯ ಧರ್ಣಪ್ಪ, ಜನಜಾಗೃತಿ ಸದಸ್ಯ ವಿಜಯಕುಮಾರ್ ಚಾರ್ಮತ, ಶೌರ್ಯ ಸ್ವಯಂಸೇವಕರಾದ ಸತೀಶ್, ಹರಿಪ್ರಸಾದ್, ಚಂದ್ರಶೇಖರ, ಲೋಹಿತ್, ದೀಪಕ್, ಪ್ರಜ್ವಲ್, ಕಾರ್ತಿಕ್ ಮತ್ತಿತರರು ಸಹಕರಿಸಿದರು.