ಐವರ್ನಾಡು: ಕೊಳ್ತಿಗೆ ರೈತಮಿತ್ರ ಕೂಟದ ಪದಾಧಿಕಾರಿಗಳಿಂದ ಕೃಷಿ ಅಧ್ಯಯನ ಪ್ರವಾಸ

0

ಜಿಲ್ಲಾ ಶ್ರೇಷ್ಠ ಕೃಷಿ ಪ್ರಶಸ್ತಿ ಪುರಸ್ಕೃತ ನವೀನ್ ಚಾತುಬಾಯಿ ಅವರ ಕೃಷಿ ಕ್ಷೇತ್ರಕ್ಕೆ ಭೇಟಿ

ಪುತ್ತೂರು ತಾಲೂಕಿನ ಕೊಳ್ತಿಗೆ ರೈತಮಿತ್ರ ಕೂಟದ ಪದಾಧಿಕಾರಿಗಳು ಸಮಗ್ರ ಕೃಷಿ ಪದ್ಧತಿಯಲ್ಲಿ ಜಿಲ್ಲಾ ಶ್ರೇಷ್ಠ ಕೃಷಿಪ್ರಶಸ್ತಿ ಪುರಸ್ಕೃತರಾದ ಐವರ್ನಾಡು ಗ್ರಾಮದ ಸಿ.ಕೆ. ನವೀನ್ ಚಾತುಬಾಯಿ ಅವರ ಕೃಷಿ ಕ್ಷೇತ್ರಕ್ಕೆ ಭೇಟಿ ನೀಡಿ, ಮಾಹಿತಿ ಪಡೆದುಕೊಂಡರು.

ಪುತ್ತೂರು ತಾಲೂಕಿನ ರೈತಮಿತ್ರ ಕೂಟದ ರೈತರುಗಳು ಹಾಗೂ ಕೊಳ್ತಿಗೆ ವ್ಯವಸಾಯ ಸೇವಾ ಸಂಘದ ಸದಸ್ಯರುಗಳು
ಭೇಟಿ ನೀಡಿ ಕೃಷಿಕ ಸಿ.ಕೆ. ನವೀನ್ ಚಾತುಬಾಯಿ ಅವರ ವಿಶಿಷ್ಠವಾದ ಮುತ್ತುಕೃಷಿ ಕೇಂದ್ರ ಮತ್ತು ತೋಟಗಾರಿಕಾ ಬೆಳೆಗಳನ್ನು ವೀಕ್ಷಿಸಿ, ಮಾಹಿತಿ ಪಡೆದುಕೊಂಡರು.


ಈ ಸಂದರ್ಭದಲ್ಲಿ ಕೊಳ್ತಿಗೆ ರೈತಮಿತ್ರ ಕೂಟದ ಅಧ್ಯಕ್ಷ ಎಸ್. ಪಿ. ಮುರಳೀಧರ ಕೆಮ್ಮಾರ, ಕೊಳ್ತಿಗೆ ವ್ಯವಸಾಯ ಸೇವಾ ಸಂಘದ ನಿರ್ದೇಶಕರುಗಳು, ಸದಸ್ಯರುಗಳು ಹಾಗೂ ರೈತಮಿತ್ರರು ಉಪಸ್ಥಿತರಿದ್ದರು.