ಭಾರಿ ಮಳೆ ಹಿನ್ನೆಲೆ ಹರಿಹರ ಪಲ್ಲತಡ್ಕದಲ್ಲಿ ಮನೆಗೆ ನುಗ್ಗಿದ ನೀರು

0

ಭಾರಿ ಮಳೆಯ ಹಿನ್ನೆಲೆಯಲ್ಲಿ ಹರಿಹರ ಪಲ್ಲತಡ್ಕದ ಕುಸುಮಾಧರ ಎಂಬವರ ಮನೆಗೆ ನೀರು ನುಗ್ಗಿ ವರದಿಯಾಗಿದೆ.

ಹರಿಹರ ಪಲ್ಲತಡ್ಕ ದೇವಸ್ಥಾನ ಬಳಿ ಇರುವ ಕುಸುಮಾಧರ ಎಂಬವರ ಮನೆಗೆ ನೀರು ನುಗ್ಗಿದ್ದು ಮನೆಯ ವಸ್ತುಗಳನ್ನು ಹಾಗೂ ಮನೆಯವರನ್ನು ಬೇರೆ ಕಡೆ ಸ್ಥಳಾಂತರಿಸುವ ಚಿಂತನೆ ನಡೆಸಲಾಗಿದೆ ಎಂದು ತಿಳಿದ ಬಂದಿದೆ.

ಈಗಾಗಲೇ ಇಲ್ಲಿನ ಕೆಲವರು ಸಹಾಯಕ್ಕೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಹರಿಹರೇಶ್ವರ ದೇವಾಲಯದ ತೋಟಕ್ಕೂ ನೀರು ನುಗ್ಗಿರುವುದಾಗಿ ತಿಳಿದು ಬಂದಿದೆ. ಕಳೆದ ಬಾರಿಯ ಮಳೆಗೆ ಕುಸುಮಾಧರ ಅವರ ಮನೆಗೆ ನೀರು ನುಗ್ಗಿ ಅಪಾರ ನಷ್ಟ ಉಂಟಾಗಿತ್ತು.