ಗಾಂಧಿನಗರ ಅಬ್ದುಲ್ ಕರೀಂ ಉಸ್ತಾದ್ ರವರ ಅನುಸ್ಮರಣೆ,ಪ್ರಾರ್ಥನಾ ಸಂಗಮ

0

ಗುರುವರ್ಯರಿಗೆ ಶಿಷ್ಯoದಿರ ಕೊಡುಗೆ ಮಾದರಿ ಕಾರ್ಯ:ಅಶ್ರಫ್ ಖಾಮಿಲ್ ಸಖಾಫಿ

4 ದಶಕಗಳ ಹಿಂದೆ ಗಾಂಧಿನಗರ ಮದರಸದಲ್ಲಿ ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ್ದ ಅಬ್ದುಲ್ ಕರೀಂ ಉಸ್ತಾದ್ ರವರಿಗೆ ಶಿಷ್ಯ ವೃದ್ಧ ಮತ್ತು ಜಮಾಅತ್ ವತಿಯಿಂದ ಅನುಷ್ಮರಣಾ ಕಾರ್ಯಕ್ರಮವನ್ನು ಇಂದು ಗಾಂಧಿನಗರ ಜುಮಾ ಮಸೀದಿಯಲ್ಲಿ ಆಚರಿಸಲಾಯಿತು.


ಈ ಸಂದರ್ಭದಲ್ಲಿ ಮಾತನಾಡಿದ ಸ್ಥಳೀಯ ಮಸೀದಿ ಖತೀಬರಾದ ಅಶ್ರಫ್ ಕಾಮಿಲ್ ಸಕಾಫಿ ನೂರಾರು ಶಿಷ್ಯ ವರ್ಗವನ್ನು ಹೊಂದಿ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದ್ದು, ಅವರನ್ನು ನೆನಪಿಸಿ ಅನು ಸ್ಮರಣೆ ಕಾರ್ಯಕ್ರಮ ನಡೆದದ್ದು ತಮ್ಮ ಕಾರ್ಯ ಎಂದು ಶ್ಲಾಘಿಸಿದರು. ಮೃತರ ಮಗಫಿರತ್ ಗಾಗಿ ವಿಶೇಷ ಪ್ರಾರ್ಥನಾ ಸಂಗಮ
ಯಾಸೀನ್ ಪಾರಾಯಣ, ದುವಾ ಮಜ್ಲಿಸ್ ನಂತರ ಅನ್ನದಾನ ನಡೆಯಿತು.
ಈ ಕಾರ್ಯಕ್ರಮದಲ್ಲಿ ನೂರಾರು ಮಂದಿ ಭಾಗವಹಿಸಿದ್ದರು.