ಸುಬ್ರಹ್ಮಣ್ಯ ಪಂಚಾಯತ್ ಗೆ ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ. ಭೇಟಿ

0

ತೆರಿಗೆ ಬಾಕಿ ಬಗ್ಗೆ ವಸೂಲಾತಿಗೆ ಪರಿಶೀಲನೆ ಭರವಸೆ

ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಇಂದು ದ .ಕ. ಜಿ.ಪಂ ಉಪಕಾರ್ಯದರ್ಶಿ ರಘು. ಎ.ಇ. ಭೇಟಿ ನೀಡಿದರು.

ಈ ಸಂದರ್ಭ ಪಂಚಾಯತ್ ಗೆ ತೆರಿಗೆ ಬಾಕಿ ಉಳಿಸಿಕೊಂಡಿರುವ ಬಗ್ಗೆ ಪ್ರಸ್ತಾಪ ಆಗಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದಾರೆ. ಅಲ್ಲದೆ ಕಡತಗಳನ್ನು ಪರಿಶೀಲನೆ ನಡೆಸಿ ತಕ್ಷಣ ಈ ನಿಟ್ಟಿನಲ್ಲಿ ಅಧಿಕಾರಿಗಳ ಜೊತೆ ಚರ್ಚಿಸಿ ಪರಿಹರಿಸುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೆಂಕಟೇಶ್ ಎಚ್.ಎಲ್ , ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರಾದ ಲಲಿತಾ ಗುಂಡಡ್ಕ, ಸದಸ್ಯ ಅಗ್ರಹಾರ ನಾರಾಯಣ,ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಕಾಶ್. ಕೆ, ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ. ಡಿ, , ಉಪಸ್ಥಿತರಿದ್ದರು.