ಜ್ಞಾನೇಶ್ ಉದ್ದಂತಡ್ಕ ನಿಧನ

0

ಅಜ್ಜಾವರ ಗ್ರಾಮದ ಮುಳ್ಯ – ಉದ್ದಂತಡ್ಕ ನಿವಾಸಿ ಗೋಪಾಲಕೃಷ್ಣ – ನಳಿನಾಕ್ಷಿ ದಂಪತಿಗಳ ಪುತ್ರ ಜ್ಞಾನೇಶ್ ಅಸೌಖ್ಯದಿಂದ ಆ.29 ರಂದು ನಿಧನರಾದರು. ಅವರಿಗೆ 13 ವರ್ಷ ವಯಸ್ಸಾಗಿತ್ತು.

ಜ್ಞಾನೇಶ್ ವಿಕಲಾಂಗಚೇತನರಾಗಿದ್ದರಲ್ಲದೆ, ಉಸಿರಾಟದ ಸಮಸ್ಯೆಯು ಇತ್ತು. ಆ.29 ರಂದು ಅಸೌಖ್ಯ ಉಲ್ಬಣಿಸಿಕೊಂಡು ಅಸ್ವಸ್ಥಗೊಂಡು ಮೃತಪಟ್ಟ ರೆಂದು ತಿಳಿದುಬಂದಿದೆ.

ಮೃತರು ತಂದೆ, ತಾಯಿ ಹಾಗೂ ಸಹೋದರಿ ಪೂರ್ವಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.