ಅಸೌಖ್ಯದಿಂದ ಬಾಲಕ ಮೃತ್ಯು

0


ಅಸೌಖ್ಯದಿಂದ ಬಾಲಕ ಮೃತಪಟ್ಟ ಘಟನೆ ಇಂದು ವರದಿಯಾಗಿದೆ.


ದೇವಚಳ್ಳ ಗ್ರಾಮದ ತಳೂರಿನ ಚಂದ್ರಶೇಖರ ಎಂಬವರ ಪುತ್ರ ಸ ಹಿ ಪ್ರಾ ಶಾಲೆ ದೇವಚಳ್ಳ ಶಾಲೆಯಲ್ಲಿ ೧ ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿಲಾಸ್ ಟಿ. ಮೃತಪಟ್ಟ ಬಾಲಕ.
ವಿಲಾಸ್ ಟಿ. ಇಂದು ಬೆಳಗ್ಗೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಮಂಗಳೂರಿನ ಎ. ಜೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಆತ ಮೃತಪಟ್ಟಿದ್ದಾನೆ. ಮೃತ ಬಾಲಕ ತಂದೆ, ತಾಯಿ ಮೋಹಿನಿ ಚಂದ್ರಶೇಖರ ತಳೂರು, ಸಹೋದರಿಯನ್ನು ಅಗಲಿದ್ದಾನೆ.