ಕಲ್ಲಗುಡ್ಡೆ : ಶ್ರೀಕೃಷ್ಣ ಜನ್ಮಾಷ್ಟಮಿ ಸಮಾರೋಪ

0

ಅಜ್ಜಾವರ ಗ್ರಾಮದ ಕಲ್ಲಗುಡ್ಡೆ ಶ್ರೀಕೃಷ್ಣ ಜನ್ಮಾಷ್ಟಮಿಯ13 ವರ್ಷದ ಕಾರ್ಯಕ್ರಮದ ಸಮಾರೋಪ ಸಮಾರಂಭ ಸೆ.6 ರಂದು‌ ಸಂಜೆ ನಡೆಯಿತು.

ಕೃಷ್ಣಾಷ್ಟಮಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಕಲ್ಲಗುಡ್ಡೆ ಅಧ್ಯಕ್ಷತೆ ವಹಿಸಿದ್ದರು. ಅಜ್ಜಾವರ ಗ್ರಾ.ಪಂ. ಮಾಜಿ ಅಧ್ಯಕ್ಷ ಪ್ರಸಾದ್ ರೈ ಮೇನಾಲ ಬಹುಮಾನ ವಿತರಕರಾಗಿದ್ದರು. ಮೇನಾಲ ವಿಷ್ಣು ಯುವಕ ಮಂಡಲ ಅಧ್ಯಕ್ಷ ರಂಜಿತ್ ರೈ ಮೇನಾಲ, ಮೇನಾಲ ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ಶೌಕತ್‌ ಅಲಿ, ಶ್ರೀವಿಷ್ಣು ಯುವಕ ಮಂಡಲದ ಗೌರವಾಧ್ಯಕ್ಷ ಶ್ರೀಧರ ಮಣಿಯಾಣಿ ಮೇನಾಲ, ಬೆನಕ ಕ್ರೀಡಾ ಮತ್ತು ಕಲಾ ಸಂಘದ ಕಾರ್ಯದರ್ಶಿ ರಫೀಕ್ ಸುಳ್ಯ, ಸುಳ್ಯ ಪೋಲೀಸ್ ಠಾಣೆ ಸಿಬ್ಬಂದಿ ಅನುಷಾ, ರಾಜೇಶ್ ಪಣಿಕ್ಕರ್ ವೇದಿಕೆಯಲ್ಲಿದ್ದರು.

ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು.

ಚಂದ್ರಶೇಖರ ಪಲ್ಲತಡ್ಕ ‌ಕಾರ್ಯಕ್ರಮ ನಿರೂಪಿಸಿದರು. ಗಂಗಾಧರ ಮೇನಾಲ‌ ವೀಕ್ಷಕ ವಿವರಣೆ ನೀಡಿದರು.