ಉಬರಡ್ಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ 30 ಲಕ್ಷ ರೂ ಬಿಡುಗಡೆ ಮಾಡಿದ್ದು ಬಿಜೆಪಿ ಸರಕಾರ

0

ಪ್ರತಿಭಟನೆಯಲ್ಲಿ ದಾಖಲೆ ಪ್ರದರ್ಶಿಸಿದ ಬಿಜೆಪಿ ಮಂಡಲ‌ ಸಮಿತಿ ಅಧ್ಯಕ್ಷ ಕಂಜಿಪಿಲಿ

ಉಬರಡ್ಕ‌ ಮಿತ್ತೂರು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣಕ್ಕೆ ರೂ.30 ಲಕ್ಷ ಅನುದಾನ‌ ಮಂಜೂರು ಮಾಡಿದ್ದು ಬಿಜೆಪಿ ಸರಕಾರ. ಇದಕ್ಕೆ‌ ನಮ್ಮಲ್ಲಿ ದಾಖಲೆಗಳಿವೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ‌ಹೇಳಿದ್ದಾರೆ.

ಸೆ.11 ರಂದು ಸುಳ್ಯ ತಾಲೂಕು‌ ಕಚೇರಿ ಎದುರು ಬಿಜೆಪಿ ರೈತ ಮೋರ್ಚಾ ವತಿಯಿಂದ ನಡೆದ ಪ್ರತಿಭಟನೆಯಲ್ಲಿ‌ ಭಾಗವಹಿಸಿ‌ ಮಾತನಾಡಿದರು.

ಮೂಡಬಿದಿರೆಯಲ್ಲಿ ರಾಣಿ ಅಬ್ಬಕ್ಕ ಪುತ್ಥಳಿ ನಿರ್ಮಾಣಕ್ಕೆ 25 ಲಕ್ಷ ರೂ ಹಾಗೂ ಉಬರಡ್ಕದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ನಿರ್ಮಾಣ ಮಾಡಲು ರೂ.30 ಲಕ್ಷ ನಮ್ಮ ಬಿಜೆಪಿ ಸರಕಾರ ಬಿಡುಗಡೆ‌ ಮಾಡಿದ್ದು. ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವರಾಗಿದ್ದ ಸುನಿಲ್ ಕುಮಾರ್ ರವರು ಈ ಅನುದಾನ ನೀಡಿದ್ದಾರೆ. ಇದಕ್ಕೆ ನಮ್ಮಲ್ಲಿ ದಾಖಲೆ ಇದೆ ಎಂದು‌ಹೇಳಿದ ಅವರು ಸಭೆಯ ವರದಿಗಾಗಿ ತೆರಳಿದ್ದ ಪತ್ರಕರ್ತರ ಕೈಗೆ ಅನುದಾನ ಮಂಜೂರಾತಿಯ ಸುತ್ತೋಲೆಯ ಪ್ರತಿಯನ್ನು ನೀಡಿದರು.

ನಮ್ಮ ಸರಕಾರ ತಂದ ಅನುದಾನವನ್ನು ಈಗ ಕಾಂಗ್ರೆಸ್ ನವರು ನಾವು ತಂದದ್ದು ಎಂದು ಹೇಳುತ್ತಿದ್ದಾರೆ. ಅವರು ತಂದಿದ್ದರೆ ದಾಖಲೆ ತೋರಿಸಲಿ. ನಾವು ದಾಖಲೆ ಇಟ್ಟೇ ಮಾತನಾಡುತ್ತೇವೆ ಎಂದು ಅವರು ಹೇಳಿದರು.