ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ ಇದರ ವತಿಯಿಂದ ಮೈಸೂರಿನಲ್ಲಿ ದೀಪಾವಳಿ ಸಾಕೇತಿಕ ಆಚರಣೆ

0

ದಕ್ಷಿಣ ಕನ್ನಡ ಜಿಲ್ಲಾ ಗೌಡ ಸಂಘ (ರಿ) ಇದರ ವತಿಯಿಂದ ಮೈಸೂರಿನಲ್ಲಿ ದೀಪಾವಳಿ ಸಾಕೇತಿಕ ಆಚರಣೆ ನಡೆಯಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ವಿಶ್ವನಾಥ್ ದೇವಶ್ಯ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿಗಳಾದ ಚಿದಾನಂದ ಕೊಳಂಬೆ ಹಾಗೂ ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ (ರಿ) ಇದರ ಕಾರ್ಯದರ್ಶಿಯಾದ ತೇಜಸ್ವಿ ನಾಯಕ್ ವಹಿಸಿದರು. ಸಂಘದ ಕಾರ್ಯದರ್ಶಿಯಾದ ಚಿನ್ನಪ್ಪ ಕೊಲಮೊಗ ಇವರು ಸಂಘ ಬೆಳೆದು ಬಂದ ಹಾದಿಯ ಬಗೆ ವಿವರಿಸಿದರು. ಸಂಘದ ಖಜಾಂಜಿ ರಾಘವ ಕಡಪಳ ಸ್ವಾಗತಿಸಿದರು. ಸಂಘದ ನಿರ್ದೇಶಕರಾದ ಆನಂದ ಪರಾರಿರವರು ಧನ್ಯವಾದ ಸಮರ್ಪಿಸಿದರು. ಚಿದಾನಂದ ಹೊಸಹಳ್ಳಿ ರವರು ನಿರೂಪಣೆ ಮಾಡಿದ್ದು ಚಿನ್ನಪ್ಪ ಬಿಡಾರ ಇವರು ಬಲಿಯೇಂದ್ರ ಸಂಪೂರ್ಣ ಅಲಂಕಾರ ಹಾಗೂ ತುಳು ಬಲಿಯೇಂದ್ರ ಸಂಧಿಯ ಮೂಲಕ ಪೂಜೆ ಕಾರ್ಯವನ್ನು ನೆರವೇರಿಸಿದರು.

ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ಸಹ ಈ ಸಮಯದಲ್ಲಿ ನೀಡಲಾಯಿತು.
ಕರಾವಳಿ ಶೈಲಿಯ ಮಾಂಸಹಾರ ಹಾಗೂ ಸಸಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು.