ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ವತಿಯಿಂದ ವಾಹನ ಸಾಲ ಸೌಲಭ್ಯ

0

ಗುತ್ತಿಗಾರು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘ ಇದರ ವತಿಯಿಂದ ವಾಹನ ಸಾಲ ಸೌಲಭ್ಯ ಡಿ.7 ರಂದು ಉದ್ಘಾಟನೆಗೊಂಡಿತು.

ಸೊಸೈಟಿಯ ಮಾಜಿ ನಿರ್ದೇಶಕ ಡಿ.ಯಂ.ರಾಮಣ್ಣ ಗೌಡ ದೀಪ ಬೆಳಗಿಸಿ ಉದ್ಘಾಟಿಸಿದರು.
ಸಂಘದ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಸರೋಜಿನಿ ಮುಳುಗಾಡು, ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಲಕ್ಷ್ಮೀ, ನಿರ್ದೇಶಕರು ಉಪಸ್ಥಿತರಿದ್ದರು. ಮೊದಲ ಗ್ರಾಹಕರಾಗಿ ವಿಜೇಶ್ ಹಿರಿಯಡ್ಕ ಮತ್ತು ಶಶಿಧರ ಶೆಟ್ಟಿಮಜಲು ಅವರಿಗೆ ಚೆಕ್ ವಿತರಿಸಲಾಯಿತು.
ನಿರ್ದೇಶಕ ಭರತ್ ನೆಕ್ರಾಜೆ ಸ್ವಾಗತಿಸಿ, ಡಿ.ಆರ್.ಲೋಕೇಶ್ವರ ವಂದಿಸಿದರು.