ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಇನ್ ಸ್ಪಯರ್ ಆವಾರ್ಡ್ ಗೆ ಆಯ್ಕೆ

0

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ಆಂಗ್ಲಮಾಧ್ಯಮ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ತ್ರಿಶಾ ಕೆ. ಹಾಗೂ 9ನೇ ತರಗತಿ ವಿದ್ಯಾರ್ಥಿ ಘನಶ್ಯಾಮ್ ಎಸ್. ಪಿ. ಕೇಂದ್ರ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಕೊಡ ಮಾಡುವ ಇನ್ಸ್ ಸ್ಪಯರ್ ಅವಾರ್ಡ್ ಗೆ ಆಯ್ಕೆ ಆಗಿದ್ದಾರೆ.

ಸೂರ್ಯಕುಮಾರ್ ಹಾಗೂ ಮಾಲತಿ ದಂಪತಿಗಳ ಪುತ್ರಿ ತ್ರಿಶಾ ಕೆ. ಹಾಗೂ ಸಂತೋಷ್ ಕುಮಾರ್ ಎಂ. ಹಾಗೂ ಶ್ರೀಮತಿ ಸವಿತಾ ಎಂ. ದಂಪತಿಗಳ ಪುತ್ರ ಘನಶ್ಯಾಮ್ ಇನ್ಸ್ ಸ್ಪಯರ್ ಅವಾರ್ಡ್ ಗೆ ಆಯ್ಕೆಯಾಗಿದ್ದು, ಶಾಲೆಯ ವಿಜ್ಞಾನ ಶಿಕ್ಷಕಿ ತೇಜಸ್ವಿ ಎಂ. ವಿ. ಮಾರ್ಗದರ್ಶನ ನೀಡಿದ್ದಾರೆ.