ತನ್ನ ವಾರ್ಡ್ ಸದಸ್ಯರೊಂದಿಗೆ ಇಪ್ತಾರ್ ಕೂಟ ಏರ್ಪಡಿಸಿ ಸೌಹಾರ್ದ ಮೆರೆದ ಎಂ ವಿ ಜಿ

0

ಗಾಂಧಿನಗರ ಜಮ್ಮಾ ಮಸೀದಿಯಲ್ಲಿ ಇಪ್ತಾರ್ ಪ್ರತಿ ದಿನ ವಿವಿಧ ಸಂಘಸಂಸ್ಥೆಗಳ ವತಿಯಿಂದ ಹಾಗೂ ಇನ್ನಿತರ ರೀತಿಯಲ್ಲಿ ಇಪ್ತಾರ್ ಕಾರ್ಯಕ್ರಮ ನಡೆಸುತ್ತಿದ್ದಾರೆ.


ಏ.5 ರಂದು ಶುಕ್ರವಾರ ನಗರ ಪಂಚಾಯತ್ ಸದಸ್ಯರಾದ ಎಂ ವೆಂಕಪ್ಪ ಗೌಡರು ನಗರ ಪಂಚಾಯತ್ ತಾನು ಪ್ರತಿನಿಧಿಸುವ ವಾರ್ಡ್ ನ ಸದಸ್ಯರೊಂದಿಗೆ ಇಪ್ತಾರ್ ಕೂಟದಲ್ಲಿ ಭಾಗವಹಿಸಿ ಮತ್ತೊಮ್ಮೆ ಸೌಹಾರ್ದಕ್ಕೆ ಸಾಕ್ಷಿಯಾದರು.


ಇಪ್ತಾರ್ ಕೂಟವನ್ನು ವೆಂಕಪ್ಪ ಗೌಡರ ಲೆಕ್ಕದಲ್ಲಿ ಏರ್ಪಾಡು ಮಾಡಲಾಗಿತ್ತು. ಇತ್ತಿಚೆಗೆ ವೆಂಕಪ್ಪ ಗೌಡರು ದೀಪಾವಳಿ ಹಬ್ಬವನ್ನು ತನ್ನ ವಾರ್ಡ್ ನ ಪ್ರತಿ ಮನೆಯವರಿಗೆ ಸಿಹಿ ತಿಂಡಿ ವಿತರಿಸಿ ಆಚರಿಸಿದ್ದರು.
ಅದೇ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಕ್ರೈಸ್ತ ಬಂದುಗಳಿಗೆ ಸಿಹಿ ಹಂಚುವುದರೊಂದಿಗೆ ಆಚರಿಸಿದರು.


ಸರ್ವಧರ್ಮದ ಹಬ್ಬಗಳನ್ನು ಆಚರಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾದರು. ಗಾಂಧಿನಗರ ಮಸೀದಿಯಲ್ಲಿ ಏರ್ಪಡಿಸಿದ್ದ ಇಪ್ತಾರ್ ಕೂಟದಲ್ಲಿ ತನ್ನ ವಾರ್ಡ್ನ ಸದಸ್ಯರು ಗಾಂಧಿನಗರ ಜಮಾಯತ್ ಕಮಿಟಿ ಅಧ್ಯಕ್ಷರು ಪದಾಧಿಕಾರಿಗಳು ಜಮಾಯತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.