ಆದಿದ್ರಾವಿಡ ಮಹಿಳಾ ತಾಲೂಕು ಸಮಿತಿ ,ಘಟಕ ಸಮಿತಿ ವತಿಯಿಂದ ವಿದ್ಯಾರ್ಥಿಗೆ ಪುಸ್ತಕ ವಿತರಣೆ

0

ಆದಿದ್ರಾವಿಡ ಯುವ ವೇದಿಕೆ(ರಿ ) ದ. ಕ ಜಿಲ್ಲೆ ಹಾಗೂ ಸುಳ್ಯ ತಾಲೂಕು ಸಮಿತಿ ಮಹಿಳಾ ತಾಲೂಕು ಸಮಿತಿ ಮತ್ತು ಘಟಕ ಸಮಿತಿಗಳ ನೇತೃತ್ವದಲ್ಲಿ ಜೂ.24ರಂದು ಅಜ್ಜಾವರ ನೆಹರುನಗರದ ಗೌಶಿಕ್ ಎಂಬ 9ನೇ ತರಗತಿಯ ವಿದ್ಯಾರ್ಥಿಯ ಶಾಲಾ ಅಡ್ಮಿಷನ್ ಶುಲ್ಕ ಹಾಗೂ ಪುಸ್ತಕವನ್ನು ನೀಡಲಾಯಿತು.

ಬಾಲಕನಿಗೆ ತಂದೆ ತಾಯಿ ಇಲ್ಲದೆ ಇರುವುದರಿಂದ ಯುವ ವೇದಿಕೆಯ ಗಮನಕ್ಕೆ ತಂದ ಕ್ಷಣವೇ ಈ ಬಾಲಕನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆ ಆಗಬಾರದು ಎಂದು ಯುವ ವೇದಿಕೆಯಿಂದ ಸಹಾಯವನ್ನು ನೀಡಲಾಯಿತು.

ಈ ಸಂದರ್ಭ ಯುವ ವೇದಿಕೆಯ ಎಲ್ಲಾ ಪಧಾಧಿಕಾರಿಗಳು ಉಪಸ್ಥಿತರಿದ್ದರು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಸರಕಾರಿ ಶಾಲಾ ಶುಲ್ಕ ಭರಿಸಲಾಗದೆ ಶಾಲೆಗೆ ಗೈರುಹಾಜರಾತಿಯಾದಲ್ಲಿ ಈ ಮಾಹಿತಿ ಶಿಕ್ಷಣ ಅಧಿಕಾರಿ ಮತ್ತು ಶಾಸಕರ ಗಮನಕ್ಕೆ ತರುವ ವ್ಯವಸ್ಥೆ ಆಗಬೇಕು ಎಂದು ಅವರು ತಿಳಿಸಿದ್ದಾರೆ.