ಮುರುಳ್ಯ ಶಾಂತಿನಗರ ಸ.ಹಿ ಪ್ರಾ ಶಾಲೆಯಲ್ಲಿ ಊಟದ ಹಾಲ್ ಉದ್ಘಾಟನೆ, ಸಮವಸ್ತ್ರ ವಿತರಣೆ, ಬಿಳ್ಕೋಡಿಗೆ ಕಾರ್ಯಕ್ರಮ

0

ಮುರುಳ್ಯ ಶಾಂತಿನಗರ ಸ.ಹಿ ಪ್ರಾ ಶಾಲೆಯಲ್ಲಿ ಊಟದ ಹಾಲ್ ಉದ್ಘಾಟನೆ, ಸಮವಸ್ತ್ರ ವಿತರಣೆ, ಬಿಳ್ಕೋಡಿಗೆ ಕಾರ್ಯಕ್ರಮ ಜು. 26ರಂದು ನಡೆಯಿತು. ಶಾಲೆಯಲ್ಲಿ ಪೋಷಕರು, ಮತ್ತು ಮುಖ್ಯ ಶಿಕ್ಷಕರಿಂದ ದೇಣಿಗೆಯಿಂದ ನಿರ್ಮಿಸಿದ ಊಟದ ಹಾಲ್ ನ್ನು ದಾನಿಗಳಾದ ನಿವೃತ ಮುಖ್ಯ ಶಿಕ್ಷಕಿ ಶ್ರೀಮತಿ ಲೀಲಾವತಿ ರಾಘವ ಗೌಡ ಉದ್ಘಾಟಿಸಿದರು.


ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ನ್ಯಾಯವಾದಿ ಜಗದೀಶ ಹುದೇರಿಯವರು ನೀಡಿದ ಸಮವಸ್ತವನ್ನು ಅವರ ಸಹೋದರ ಗೋಪಾಲಕೃಷ್ಣ ವಿದ್ಯಾರ್ಥಿಗಳಿಗೆ ವಿತರಿಸಿದರು. ಶಾಲೆಯಲ್ಲಿ ಗೌರವ ಶಿಕ್ಷಕಿಯಾಗಿದ್ದ ಕು. ಪ್ರೇಮಲತಾರನ್ನು ಸನ್ಮಾನಿಸಿ ಬೀಳ್ಕೋಡಲಾಯಿತು.


ಎಸ್.ಡಿ.ಎಂ.ಸಿ ಅಧ್ಯಕ್ಷ ದಿನೇಶ ನಡುಬೈಲು, ಶಾಲಾ ಮುಖ್ಯ ಶಿಕ್ಷಕಿ ಸೀತಾ, ಉಪಾಧ್ಯಕ್ಷೆ ಶ್ರೀಮತಿ ಬೇಬಿ ಮತ್ತು ದಾನಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಎಸ್.ಡಿ.ಎಂ.ಸಿ ಸದಸ್ಯರು ಸಹ ಶಿಕ್ಷಕರು, ಪೋಷಕರು ವಿಧ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.