ತೊಡಿಕಾನ: ದೇವರಗುಂಡಿ ಜಲಪಾತದ ಬಳಿ ಮನೆಯ ಹಿಂಬದಿ ಬರೆಜರಿತ

0

ಮನೆಯವರ ಸ್ಥಳಾಂತರಕ್ಕೆ ಸೂಚನೆ

ಅರಂತೋಡು ಗ್ರಾಮ ಪಂಚಾಯತಿ ವ್ಯಾಪ್ತಿಯ ತೊಡಿಕಾನ ಗ್ರಾಮದ ದೇವರಗುಂಡಿ ಜಲಪಾತದ ಬಳಿ ಭಾರೀ ಮಳೆಯಿಂದಾಗಿ ಮನೆಯೊಂದರ ಹಿಂಬದಿಯಲ್ಲಿ ಬರೆ ಜರಿದು ಗೋಡೆಗಳಿಗೆ ಹಾನಿ ಸಂಭವಿಸಿದ ಘಟನೆ ಜು.,29ರಂದು ರಾತ್ರಿ ಸಂಭವಿಸಿದೆ.

ದೇವರಗುಂಡಿ ಜಲಪಾತದ ಬಳಿಯ ನಿವಾಸಿ ಉತ್ತಯ್ಯ ಗೌಡ ಅವರ ಮನೆಯ ಹಿಂಬದಿಯಲ್ಲಿ ಭಾರೀ ಪ್ರಮಾಣದಲ್ಲಿ ಬರೆ ಜರಿದಿದ್ದು, ಮನೆಯ ಗೋಡೆಗಳಿಗೆ ಹಾನಿಯಾಗಿದೆ.

ಅರಂತೊಡು ಗ್ರಾಮ ಆಡಳಿತಾಧಿಕಾರಿ ಶರತ್ ಹಾಗೂ ಗ್ರಾ.ಪಂ.ಗೆ ವಿಷಯ ತಿಳಿಸಲಾಗಿದ್ದು, ಸ್ಥಳಕ್ಕೆ ಗ್ರಾಮ ಸಹಾಯಕ ಭರತ್ ಹಾಗೂ ಗ್ರಾ.ಪಂ. ಸದಸ್ಯ ರವಿಪೂಜಾರಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬರೆ ಇನ್ನಷ್ಟು ಜಾರಿ ನಿಂತಿರುವುದರಿಂದ ಮನೆಯವರನ್ನು ಸಂಬಂಧಿಕರ ಮನೆಗೆ ತೆರಳುವಂತೆ ಸೂಚಿಸಿರುವುದಾಗಿ ತಿಳಿದುಬಂದಿದೆ.