ಭಾರಿ ಮಳೆಗೆ ಮೊಗ್ರದಲ್ಲಿ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿ

0

ಗುತ್ತಿಗಾರು ಗ್ರಾಮದ ಮೊಗ್ರ, ಕಮಿಲ ಭಾಗದಲ್ಲಿ ಆ.16 ರ ಸಂಜೆ ಸುರಿದ ಭಾರಿ ಮಳೆಗೆ ಗ್ರಾಮ ಭಾರತ ತಂಡ ನಿರ್ಮಿಸಿದ ಕಾಲು ಸಂಕಕ್ಕೆ ಹಾನಿಯಾಗಿರುವುದಾಗಿ ವರದಿಯಾಗಿದೆ.

ಅಪಾರ ಪ್ರಮಾಣದ ನೀರು ಹರಿದ ಕಾರಣ ಮರದ ದಿಮ್ಮಿಗಳು ನೀರಲ್ಲಿ ಬಂದು ತೂಗು ಸೇತುವೆಗೆ ಬಡಿದು ಕಾಲು ಸೇತುವೆಗೆ ಹಾನಿಯಾಗಿದೆ.

ಮಳೆಗಾಲದಲ್ಲಿ ಈ ಕಾಲು ಸಂಕ ಮಾತ್ರ ಭಯವಿಲ್ಲದೆ ಸಂಚರಿಸುವ ಏಕೈಕ ವ್ಯವಸ್ಥೆ ಆಗಿದ್ದು ಅದಕ್ಕೂ ತೊಂದರೆ ಉಂಟಾಗಲಿದೆ.