ಸುಳ್ಯ ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿನಿ ಯುಕ್ತಿಯವರಿಂದ ಕ್ಯಾನ್ಸರ್ ರೋಗಿಗಳಿಗೆ ಕೇಶದಾನ

0


ಸುಳ್ಯ ಸೈಂಟ್ ಜೋಸೆಫ್ ಶಾಲೆಯ ೯ ನೇ ತರಗತಿ ವಿದ್ಯಾರ್ಥಿನಿ ಕು.ಯುಕ್ತಿ ಯವರು ಕೇನ್ಸರ್ ರೋಗಿಗಳಿಗಾಗಿ ತಮ್ಮ ಕೇಶ ದಾನ ಮಾಡಿದ್ದಾರೆ.
ಇವರು ಜಯನಗರ ನಿವಾಸಿ ಶಾಂತಪ್ಪ ಡಿ. ಹಾಗೂ ಹೇಮಾ ದಂಪತಿಯವರ ಪುತ್ರಿಯಾಗಿದ್ದು ಆ ೧೯ ರಂದು ಅವರು ತಮ್ಮ ಕೇಶವನ್ನು ಸುಳ್ಯದ ಅಮೃತಗಂಗಾ ಸಮಾಜ ಸೇವಾ ಸಂಸ್ಥೆಯ ಸ್ಥಾಪಕ ಉದಯ ಭಾಸ್ಕರ್ ರವರಿಗೆ ಹಸ್ತಾಂತರ ಮಾಡುವ ಮೂಲಕ ಕೇಶ ದಾನ ಮಾಡಿದ್ದಾರೆ.
ಈ ಸಂಸ್ಥೆಯು ಕೇನ್ಸರ್ ಪೀಡಿತ ರೋಗಿಗಳಿಗೆ ನೇರವಾಗುವ ಉದ್ದೇಶದಿಂದ ಈ ಸೇವೆಯನ್ನು ಮಾಡುತ್ತಿದ್ದು ಅಮೃತ ಬಿಂದು ರಕ್ತ ನಿಧಿ, ಅಮೃತ ದೃಷ್ಟಿ ನೇತ್ರ ಧಾನ, ಅಮೃತ ಕೇಶ ಕೂದಲು ದಾನ ಅಭಿಯಾನ ನಡೆಸುತ್ತಿದೆ.