ಬೆಳ್ಳಾರೆ ದಾರುಲ್ ಹುದಾ ತಂಬಿನಮಕ್ಕಿ ಸ್ಥಾಪನೆಯ ಪ್ರಚಾರಾರ್ಥ ಬಹರೈನಲ್ಲಿ ದುವಾ ಮಜಿಲಿಸ್

0

ಬೆಳ್ಳಾರೆ ದಾರುಲ್ ಹುದಾ ಸಂಸ್ಥೆಯ ಪ್ರಚಾರಾರ್ತ ವಾಗಿ ವಿದೇಶದ ಬಹರೈನ್ ನಲ್ಲಿ ದುವಾ ಮಜಿಲಿಸ್ ನಡೆಯಿತು.

ಖಲೀಲ್ ಹಿಮಮಿ ಸಖಾಫಿ ಕೊಟ್ಟಮುಡಿ ಉಸ್ತಾದರ ನೇತೃತ್ವದಲ್ಲಿ ಬಹರೈನ್ ಅರಾದ್ ಜಾಮಿಯಾ ಮಸೀದಿಯಲ್ಲಿ ದುಆ ಸಂಗಮವನ್ನು ಏರ್ಪಡಿಸಲಾಗಿತ್ತು.

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಜಮಾಲುದ್ದೀನ್ ವಿಟ್ಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ದಾರುಲ್ ಹುದಾ ಸಂಸ್ಥೆಯ ಗುರುಗಳಾದ ಖಲೀಲ್ ಹಿಮಮಿ ಸಖಾಫಿ ಉಸ್ತಾದರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆ ನಡೆಸಿಕ್ಕೊಂಡು ಬರುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ಸುಳ್ಯ ವೆಲ್ಫೇರ್ ಅಸೋಸಿಯೇಷನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಸೂಫಿ ಪೈಂಬೆಚ್ಚಾಲ್,ಕೆಸಿಎಫ್ ಶಿಕ್ಷಣ ಇಲಾಖೆ ಅಧ್ಯಕ್ಷ ಹನೀಫ್ ಮುಸ್ಲಿಯಾರ್, ಮುಹಿಮ್ಮಾತ್ ಓರ್ಗನೈಝರ್ ಅಬೂಬಕರ್ ಸಖಾಫಿ, ಡಿ ಕೆ ಯಸ್ಸಿ ಡೆವೆಲಪ್ ಮೆಂಟ್ ಚೇರ್ಮೇನ್ ಅಬ್ದುಲ್ಲಾ ಅಲವಿ ಮೊದಲಾದವರು ಕೆ ಸಿ ಎಫ್, ಡಿ ಕೆ ಯಸ್ಸಿ, ಕೊಡಗು, ಸುಳ್ಯ, ಮುಹಿಮ್ಮಾತ್ ಕಮಿಟಿಯ ವತಿಯಿಂದ ಕಾರ್ಯಕ್ರಮಕ್ಕೆ ಹಾಗೂ ಸಂಸ್ಥೆಗೆ ಶುಭ ಹಾರೈಸಿದರು.

ಕೆಸಿಎಫ್ ನೋರ್ತ್ ಝೋನ್ ಶಿಕ್ಷಣ ಇಲಾಖೆ ಕಾರ್ಯದರ್ಶಿ ಸಿದ್ದೀಖ್ ಉಸ್ತಾದ್ ಮಂಜನಾಡಿ, ಕೆಸಿಎಫ್ ಮನಾಮ ಸೆಕ್ಟರ್ ಅಧ್ಯಕ್ಷರಾದ ಅಹ್ಮದ್ ಮುಸ್ಲಿಯಾರ್ ಗಟ್ಟಮನೆ, ಅಸಾಸ್ ಮಲ್ಲೂರು ಓರ್ಗನೇಝರ್ ಅಬ್ದುಲ್ ಖಾದರ್ ಸಖಾಫಿ ಪಟ್ಟೋರಿ, ದಾರುಲ್ ಅಶರಿಯಾ ಸೂ lರಿಬೈಲ್ ಓರ್ಗನೇಝರ್ ಇಸ್ಮಾಯಿಲ್ ಸಅದಿ ಬೇಂಗಿಲ, ಇಹ್ಸಾನ್ ಉತ್ತರ ಕರ್ನಾಟಕ ಓರ್ಗನೇಝರ್ ಮುಹಮ್ಮದ್ ಅಲಿ ವೇಣೂರು, ಅಬೂಬಕರ್ ಮಾದಾಪುರ, ಅಬ್ದುಲ್ಲಾ ಕೊಡಗು, ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ದಾರುಲ್ ಮುಸ್ತಫಾ ಓರ್ಗನೇಝರ್ ಹನೀಫ್ ಮುಸ್ಲಿಯಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಕೆಸಿಎಫ್ ರಾಷ್ಟ್ರೀಯ ಸಮಿತಿ ಸಂಘಟನಾ ವಿಭಾಗದ ಅಧ್ಯಕ್ಷರಾದ ಖಲಂದರ್ ಉಸ್ತಾದರು ನೂತನ ಸಮಿತಿಗೆ ಚಾಲನೆ ನೀಡಿ, ಶುಭ ಹಾರೈಸಿದರು. ನೂತನ ಸಮಿತಿಯ ಅಧ್ಯಕ್ಷರಾದ ಮಜೀದ್ ಝುಹ್ರಿ ಉಸ್ತಾದರು ಧನ್ಯವಾದ ಸಮರ್ಪಿಸಿದರು.