ಧ್ವನಿವರ್ಧಕ ಮತ್ತು ದೀಪಾಲಂಕರ ಮಾಲಕರ ಜಿಲ್ಲಾ ಸಂಘದ ಮಹಾಸಭೆ

0

ಧ್ವನಿವರ್ಧಕ ಮತ್ತು ದೀಪಾಲಂಕಾರ ಮಾಲಕರ ಜಿಲ್ಲಾ ಸಂಘ ದಕ್ಷಿಣ ಕನ್ನಡ ಜಿಲ್ಲೆ ಇದರ ವಾರ್ಷಿಕ ಮಹಾಸಭೆ ಆ.21 ರಂದು ಸುಳ್ಯ ಜ್ಯೋತಿ ಸರ್ಕಲ್ ಬಳಿಯಿರುವ ಅಮೃತಭವನದಲ್ಲಿ ನಡೆಯಿತು.


ಮಹಾಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ರಾಜಶೇಖರ ಶೆಟ್ಟಿ ಕುಡ್ತಮುಗೇರು ರವರು ವಹಿಸಿದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬೆನೆಟ್ ಡಿಸಿಲ್ವ ಮಂಗಳೂರು ವರದಿ ವಾಚಿಸಿದರು.


ಜಿಲ್ಲಾ ಕೋಶಾಧಿಕಾರಿ ಧನರಾಜ್ ಶೆಟ್ಟಿ ಫರಂಗಿಪೇಟೆ ಲೆಕ್ಕ ಪತ್ರಮಂಡಿಸಿದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರಂಗ ನಿರ್ದೇಶಕ ಜೀವನ್ ರಾಮ್ ಸುಳ್ಯ ಶುಭ ಹಾರೈಸಿದರು.


ಸುಳ್ಯ ತಾಲೂಕು ಧ್ವನಿವರ್ಧಕ ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಶಾಮಿಯಾನ ಮಾಲಕರ ಸಂಘದ ಕಾರ್ಯದರ್ಶಿ ಗುರುದತ್ತ್ ನಾಯಕ್ ಸ್ವಾಗತಿಸಿದರು.


ಎನ್ ಎಸ್ ರಾಜೇಶ್ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿ ಸ್ಕಂದ ಸುಬ್ರಹ್ಮಣ್ಯ ವಂದನಾರ್ಪಣೆ ಮಾಡಿದರು.