ಸೆ. 1 ರಂದು ಜಟ್ಟಿಪಳ್ಳದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ

0


ಕಪಿಲ ಯುವಕ ಮಂಡಲ ಜಟ್ಟಿಪಳ್ಳ ಮತ್ತು ಮಾನಸ ಮಹಿಳಾ ಮಂಡಲ ಜಟ್ಟಿಪಳ್ಳ ಇದರ ಜಂಟಿ ಆಶ್ರಯದಲ್ಲಿ ಜಟ್ಟಿಪಳ್ಳದಲ್ಲಿ ಸೆ. 1ರಂದು ೩೬ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ನಡೆಯಲಿದ್ದು, ಯುವಕರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ರೀತಿಯ ಆಟೋಟ ಹಾಗೂ ಸಾಂರ್ಸ್ಕರತಿಕ, ಕೃಷ್ಣವೇಷ ಸ್ಪರ್ಧೆಗಳು ನಡೆಯಲಿದೆ. ಇದರ ಆಮಂತ್ರಣ ಬಿಡುಗಡೆಯ ಜಟ್ಟಿಪಳ್ಳ ಚೆನ್ನಕೇಶವ ದೇವರ ವಸಂತಕಟ್ಟೆಯಲ್ಲಿ ಆ.22 ರಂದು ನಡೆಯಿತು.


ಶ್ರೀರಾಮ ಭಜನಾ ಸೇವಾ ಸಂಘದ ಅಧ್ಯಕ್ಷ ಎಂ.ಆರ್.ಹರಿಶ್ಚಂದ್ರ ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು. ಕಪಿಲ ಯುವಕ ಮಂಡಲದ ಅಧ್ಯಕ್ಷ ಹರೀಶ್ ಜೆ.ಬಿ., ಗೌರವಾಧ್ಯಕ್ಷ ವಿಶುಕುಮಾರ್, ಮಾಜಿ ಅಧ್ಯಕ್ಷರಾದ ನಿರಂಜನ್, ತನುದೀಪ್ ಪೆಲ್ತಡ್ಕ, ಚೇತನ್ ಎಸ್., ಮಹಿಳಾ ಮಂಡಲದ ಮಾಜಿ ಅಧ್ಯಕ್ಷರುಗಳಾದ ಪಾರ್ವತಿ ನಾರಾಯಣ ಮತ್ತು ಸವಿತಾ ಲಕ್ಷಣ ಆಚಾರ್ಯ, ಶ್ರೀರಾಮ ಭಜನಾ ಸೇವಾ ಸಂಘದ ಉಪಾಧ್ಯಕ್ಷ ರಮಾನಂದ ರೈ, ಕಾರ್ಯದರ್ಶಿ ರಘುನಾಥ ಜಟ್ಟಿಪಳ್ಳ, ಕೋಶಾಧಿಕಾರಿ ಸಂತೋಷ್‌ಕುಮಾರ್ ಶೆಟ್ಟಿ, ಯುವಕ ಮಂಡಲದ ಪದಾಧಿಕಾರಿಗಳಾದ ನಿತೇಶ್, ಕಿರಣ್, ಅನಿಲ್, ವಿಪಿನ್ ಕರ್ಕೇರ, ಊರವರಾದ ಹರೀಶ್ ಬಂಟ್ವಾಳ್, ಶುಭಕಕರ ಆಳ್ವ, ಕೃಷ್ಣ ಜೆ., ಚಂದ್ರ ಮೊದಲಾದವರು ಉಪಸ್ಥಿತರಿದ್ದರು.