ತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ ವತಿಯಿಂದ ಹಿತೇಶ್ ಗೆ ಧನಸಹಾಯ

0

ತಮಿಳು ರಿಪಾರ್ಟಿಯರ್ಸ್ ಯುನೈಟೆಡ್ ಸೇವಾ ಟ್ರಸ್ಟ್ ( ರಿ).ಸುಳ್ಯ ಇದರ ಆಶ್ರಯದಲ್ಲಿ ಕೆ.ಎಪ್.ಡಿ.ಸಿ ಮೆಡಿಕಲ್ ಗ್ರೂಪ್ ಇವರ ಸಹಕಾರದೊಂದಿಗೆ ಬೋನ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಬಾಲಕ ಹಿತೇಶ್ ಪ್ರಾಯ 9 ಇವರ ಚಿಕಿತ್ಸೆಗೆ ಸಂಗ್ರಹಿಸಿದ ಸಹಾಯಧನ ರೂ.1,58,796 ನ್ನು ಇಂದು ದೇರಳಕಟ್ಟೆಯ ಕೆ.ಎಸ್.ಹೆಗ್ಡೆ ಆಸ್ಪತ್ರೆಗೆ ತೆರಳಿ ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ಪುವೇಂದ್ರನ್ ಕೂಟೇಲು ಕಾರ್ಯದರ್ಶಿ ವಿಜಯ್ ನಾಗ ಪಟ್ಟಣ ಕೋಶಾಧಿಕಾರಿ ಸುಧಾಕರ್ ನಾಗ ಪಟ್ಟಣ ಸಿಲ್ವಿನ್ ರಾಜ್ ನಾಗ ಪಟ್ಟಣ ಉಪಸ್ಥಿತರಿದ್ದರು.


ಬಾಲಕನ ಚಿಕಿತ್ಸೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಯನ್ನು ಟ್ರಸ್ಟ್ ನ ವತಿಯಿಂದ ಕೇಳಿಕೊಳ್ಳುತ್ತೇವೆ.