ವಿಶ್ವ ಯುವಕ ಮಂಡಲ ಬಾಳುಗೋಡು ಆಶ್ರಯದಲ್ಲಿ ಕಂಡೊಡೊಂಜಿ ದಿನ ಗೊಬ್ಬು ಕಾರ್ಯಕ್ರಮ

0

ವಿಶ್ವ ಯುವಕ ಮಂಡಲ ಬಾಳುಗೋಡು ಇವರ ಆಶ್ರಯದಲ್ಲಿ ಕಂಡೊಡೊಂಜಿ ದಿನ ಗೊಬ್ಬು ಕಾರ್ಯಕ್ರಮ ಸೆ.15 ರಂದು ಕಿರಿಭಾಗ ಬಾಳುಗೋಡು ಕೆಸರುಗದ್ದೆ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಯು.ಸಂ ಮಂಡಳಿ ಸುಳ್ಯ ಇದರ ನಿರ್ದೆಶಕರಾದ ದಿನೇಶ್ ಹಾಲೆಮಜಲು ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವ ಯುವಕ ಮಂಡಲದ ಅದ್ಯಕ್ಷರಾದ ರಾಜೇಶ್ ಕಿರಿಭಾಗ ವಹಿಸಿದ್ದರು.

ವಿಶ್ವ ಯುವಕ ಮಂಡಲದ ಹಿರಿಯ ಸದಸ್ಯ, ಕ್ರೀಡಾಕೂಟದ ಸ್ಥಳದಾನಿಗಳಾಗ ಯೊಗೀಶ್ ಕಿರಿಭಾಗ ಕೆಸರು ಗದ್ದೆಗೆ ಹಾಲು ಎರಯುವ ಮೂಲಕ ಕ್ರೀಡಾ ಕೂಟಕ್ಕೆ ಚಾಲನೆ ನೀಡಿದರು.ಮುಖ್ಯ ಅಥಿತಿಗಳಾಗಿ ಹರಿಹರ ಪಲ್ಲತ್ತಡ್ಕ ಗ್ರಾ.ಪಂ ಅದ್ಯಕ್ಷರಾದ ವಿಜಯ ಕುಮಾರ್ ಅಂಙಣ ಹಾಜರಿದ್ದರು.
ಸುಳ್ಯ ವಿಧಾನಸಭಾ ಕ್ಷೇತ್ರದ ಸೀಮಿತ ತಂಡಗಳಿಗೆ ಮುಕ್ತ ಹಗ್ಗಜಗ್ಗಾಟ, ವಾಲಿಬಾಲ್ ಹಾಗು ಸ್ಥಳಿಯರಿಗೆ ವಿವಿದ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಅಜಯ್ ಪೊಯ್ಯಮಜಲು ಕಾರ್ಯಕ್ರಮ ನಿರೂಪಿಸಿದರು