ದೊಡ್ಡೇರಿ : ಶಾಲಾ ಆವರಣದಲ್ಲಿ ತೆಂಗಿನ ಸಸಿ ನೆಡುವ ಕಾರ್ಯಕ್ರಮ

0

ಅಜ್ಜಾವರ ಗ್ರಾಮದ ದೊಡ್ಡೇರಿ ಕಿ.ಪ್ರಾ.ಶಾಲೆಯಲ್ಲಿ ಗಾಂಧಿ‌ಜಯಂತಿ ದಿನವಾದ ಅ.2 ರಂದು‌ ತೆಂಗಿನ ಗಿಡಗಳನ್ನು ಶಾಲಾ‌ ಆವರಣದಲ್ಲಿ ನೆಡಲಾಯಿತು.

ಸರಕಾರಿ ನೌಕರರ ಸಂಘದ ಅಧ್ಯಕ್ಷೆ ಧನಲಕ್ಷ್ಮೀ ಕುದ್ಪಾಜೆ, ಅಕ್ಷರದಾಸೋಹ ಅಧಿಕಾರಿ ವೀಣಾ ಎಂ.ಟಿ., ಶಿಕ್ಷಣ ಇಲಾಖೆಯ ಎಸ್ಡಿಸಿ ಯೋಗೀಶ್‌ ಭರತ್ ಉಪಸ್ಥಿತರಿದ್ದರು.
ಎಸ್ಡಿಎಂಸಿ ಉಪಾಧ್ಯಕ್ಷೆ ನಾಗವೇಣಿ ಟಿ ಅಧ್ಯಕ್ಷತೆ ವಹಿಸಿದ್ದರು.

ಚೊಕ್ಕಾಡಿ‌ಸತ್ಯಸಾಯಿ ಸೇವಾ ಸಂಸ್ಥೆ ವತಿಯಿಂದ‌ ನೀಡಲಾದ 40‌ತೆಂಗಿನ ಗಿಡಗಳನ್ನು ‘ತಾಯಿಗೊಂದು ಮರ’ ಕಾರ್ಯಕ್ರಮದಲ್ಲಿ ಪೋಷಕರಿಂದ ನೆಡಸಲಾಯಿತು.