ಆಲೆಟ್ಟಿ: ಮೊರಂಗಲ್ಲು ಬಳಿ ಬೈಕ್ ಸ್ಕಿಡ್ ಆಗಿ ಯುವಕನಿಗೆ ಗಂಭೀರ ಗಾಯ- ಆಸ್ಪತ್ರೆಗೆ ದಾಖಲಿಸಿದ ಜನನಿ ಸದಸ್ಯರು

0

ಸುಳ್ಯದಲ್ಲಿ ದಸರಾ ಉತ್ಸವದ ಶೋಭಾಯಾತ್ರೆಯ ದಿನದಂದು ಆಲೆಟ್ಟಿ ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಯುವಕನೊಬ್ಬ ಮೊರಂಗಲ್ಲು ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಬಿದ್ದು ಜಖಂಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ
ಅ.17 ರಂದು ಸಂಜೆ ವರದಿಯಾಗಿದೆ.
ಗಾಯಗೊಂಡ ಯುವಕ ಏಣಾವರದ ನಿವಾಸಿ ಇಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದ ಯತೀಶ್ ಎಂದು ತಿಳಿದು ಬಂದಿದೆ.

ಆಲೆಟ್ಟಿಯಿಂದ ಜೆ.ಎಫ್.ಸಿ ಟೈಗರ್ಸ್ ರವರ ಹುಲಿ ಕುಣಿತದ ಟ್ಯಾಬ್ಲೋ ಬರುತ್ತಿರುವ ಸಂದರ್ಭದಲ್ಲಿ
ಘಟನೆ ಸಂಭವಿಸಿದ್ದು ಮೆರವಣಿಗೆಯಲ್ಲಿ ಬರುತ್ತಿದ್ದ ತೆರದ ವಾಹನದಲ್ಲಿ ಜನನಿ ಕ್ಲಬ್ ತಂಡದ ಸದಸ್ಯರು ರಸ್ತೆಯಲ್ಲಿ ಬಿದ್ದಿದ್ದ ಯತೀಶ್ ರವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ.
ವಿಪರೀತ ಪ್ರಮಾಣದಲ್ಲಿ ದವಡೆಯಭಾಗಕ್ಕೆಗಾಯವಾಗಿರುವುದರಿಂದ
ಪ್ರಥಮ ಚಿಕಿತ್ಸೆ ನೀಡಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ಸಲಹೆ ನೀಡಿದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತು.