ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಕ್ಕೆ ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈಯವರ ಅಧಿಕೃತ ಭೇಟಿ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗಕ್ಕೆ ಪ್ರಾಂತೀಯ ಅಧ್ಯಕ್ಷ ಲ. ಗಂಗಾಧರ ರೈಯವರ ಅಧಿಕೃತ ಭೇಟಿ ಕಾರ್ಯಕ್ರಮ ಅ. 19ರಂದು ಬೆಳ್ಳಾರೆಯ ಜೆಡಿ ಆಡಿಟೋರಿಯಂ ಪೆರುವಾಜೆಯಲ್ಲಿ ಬೆಳ್ಳಾರೆ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ಲ. ಉಷಾ ಬಿ. ಭಟ್ ಅಧ್ಯಕ್ಷತೆಯಲ್ಲಿ ನಡೆಯಿತು. ಲವ್ ದ ನೇಷನ್ ಕಾರ್ಯಕ್ರಮದಡಿಯಲ್ಲಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಐಪಿಪಿ ಲ. ವಿಠ್ಠಲ ಶೆಟ್ಟಿ, ಮತ್ತು ದೇವದಾಸ್ ಶೆಟ್ಟಿ, ಯೋಧನಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಕ್ಯಾ. ಸುಧಾನಂದ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಸುಳ್ಯ ತಾಲೂಕಿನ ಪ್ರತಿನಿಧಿಯಾಗಿ ಆಯ್ಕೆಯಾದ ಮಾ. ಆತ್ಮೀಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರಾಂತೀಯ ರಾಯಭಾರಿ ಲ. ರೇಣುಕಾ ಸದಾನಂದ ಜಾಕೆ ಎಂ.ಜೆ.ಎಫ್, ವಲಯಾಧ್ಯಕ್ಷ ಲ. ರಂಗಯ್ಯ ಶೆಟ್ಟಿಗಾರ್ ಎಂ.ಜೆ.ಎಫ್, ಐಪಿಪಿ ಲ. ವಿಠಲ್ ಶೆಟ್ಟಿ, ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ, ಗುತ್ತಿಗಾರು ಲಯನ್ಸ್ ಕ್ಲಬ್ ಅಧ್ಯಕ್ಷ ಕುಶಾಲಪ್ಪ ತುಂಭತ್ತಾಜೆ, ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಧ್ಯಕ್ಷೆ ಲ. ಉಷಾ ಬಿ. ಭಟ್ ಸ್ವಾಗತಿಸಿದರು. ಲಯನ್ಸ್ ಕ್ಲಬ್ ಬೆಳ್ಳಾರೆಯ ಕಾರ್ಯದರ್ಶಿ ಲ. ಚೇತನ್ ಡಿ. ಶೆಟ್ಟಿ ವರದಿ ವಾಚಿಸಿದರು. ಕೋಶಾಧಿಕಾರಿ ಲ. ಈಶ್ವರ ವಾರಣಾಶಿ ಅತಿಥಿಗಳನ್ನು ವೇದಿಕೆಯಲ್ಲಿ ಆಹ್ವಾನಿಸಿ, ವಂದನಾರ್ಪನೆಗೈದರು.


ಲ. ಭವಾನಿ ವಿ. ಶೆಟ್ಟಿ ಧ್ವಜ ವಂದನೆ ಓದಿದರು. ಲ. ಯತೀಶ್ ಭಂಡಾರಿ ನೀತಿ ಸಂಹಿತೆ ಓದಿದರು ಲ. ಗಣೇಶ್ ರೈ, ಲ. ವಿಟ್ಟಲ್ ಶೆಟ್ಟಿ ಮತ್ತು ದೇವದಾಸ್ ಶೆಟ್ಟಿಯವರನ್ನು ಪರಿಚಯಿಸಿದರು. ಲ. ಸುನೀತಾ ಮನೋಹರ್ ಕ್ಯಾ. ಸುದಾನಂದ ಮತ್ತು ಪ್ರಾಂತ್ಯದಕ್ಷರನ್ನು ಪರಿಚಯಿಸಿದರು. ಲ. ರಕ್ಷಿತ್ ಪೆರುವಾಜೆ ಆತ್ಮೀಯರನ್ನು ಸಭೆಗೆ ಪರಿಚಯಿಸಿದರು. ಆರ್ಥಿಕವಾಗಿ ಕಷ್ಟದಲ್ಲಿರುವ 3 ಕುಟುಂಬಗಳಿಗೆ ಆಹಾರದ ಕಿಟ್ ವಿತರಿಸಲಾಯಿತು. ಪ್ರಾಂತ್ಯಾಧ್ಯಕ್ಷ ಲಮ ಗಂಗಾಧರ ರೈಯವರನ್ನು ಬೆಳ್ಳಾರೆ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಪ್ರಾಂತ್ಯದ ವಿವಿಧ ಕ್ಲಬ್‌ಗಳ ಪದಾಧಿಕಾರಿಗಳು, ಸದಸ್ಯರು, ಬೆಳ್ಳಾರೆ ಲಯನ್ಸ್ ಕ್ಲಬ್‌ನ ಪದಾಧಿಕಾರಿಗಳು, ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು.