ದ.ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ತಂಡದಿಂದ ಕನ್ನಡ ರಾಜ್ಯೋತ್ಸವ ಆಚರಣೆ

0

ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿಯಲ್ಲಿ ದ.ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ತಂಡದಿಂದ ಕನ್ನಡ ರಾಜ್ಯೋತ್ಸವ ಆಚರಣೆ ನ. 1ರಂದು ನಡೆಯಿತು.
ಕೇಂದ್ರ ಕಛೇರಿಯ ಆದೇಶದಂತೆ ನ.1ರಂದು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಛೇರಿ, ಮೇರಿಹಿಲ್ ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ದ.ಕ ಜಿಲ್ಲಾ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕಛೇರಿಯ ಸಿಬ್ಬಂದಿಗಳು ಮತ್ತು ಗೃಹರಕ್ಷಕ, ಗೃಹರಕ್ಷಕಿಯರು ರಾಷ್ಟ್ರಗೀತೆ, ನಾಡು ಗೀತೆ ಮತ್ತು 5 ಕನ್ನಡ ಗೀತೆಗಳನ್ನು ಹಾಡಿದರು. ಕಾರ್ಯಕ್ರಮದಲ್ಲಿ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಶ್ಯಾಮಲಾ, ಮಂಗಳೂರು ಘಟಕದ ಪ್ರಭಾರ ಘಟಕಾಧಿಕಾರಿ ಮಾರ್ಕ್ ಶೇರಾ, ಶ್ರೀಮತಿ ಕಿರಣ್ಮಯಿ, ಶ್ರೀಮತಿ ರಮಣಿ, ಶ್ರೀಮತಿ ಅಂಬಿಕಾ, ಶ್ರೀಮತಿ ಮಮತ, ಶ್ರೀಮತಿ ಶ್ರೀಲತಾ, ಗೃಹರಕ್ಷಕ ಗೃಹರಕ್ಷಕಿಯರಾದ ಸುಲೋಚನಾ, ನಮಿತಾ ಬಾಲಕೃಷ್ಣ, ರೇವತಿ ದಿನೇಶ್, ಉಷಾ, ನೂರ್‍ಜಹಾನ್, ಕವಿತಾ, ಜಯಂತಿ, ಭವ್ಯಶ್ರೀ, ಖತೀಜಮ್ಮ, ಸಂದೇಶ್, ದಿವಾಕರ್, ಸುಮಂತ್, ಮಾಲತೇಶ್ ಮತ್ತಿತರರು ಉಪಸ್ಥಿತರಿದ್ದರು.