ಜಾಲ್ಸೂರು: ಅಟೋಚಾಲಕ ದಿನೇಶ್ ಕೊಡೆಂಕಿರಿ ಅಸೌಖ್ಯದಿಂದ ನಿಧನ

0

ಜಾಲ್ಸೂರಿನಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿದ್ದ , ಕನಕಮಜಲು ಗ್ರಾಮದ ಕೊಡೆಂಕಿರಿ ಚೆನ್ನಪ್ಪ ಗೌಡರ ಪುತ್ರ ದಿನೇಶ್ ಅವರು ಅಸೌಖ್ಯದಿಂದಾಗಿ ಜು.3ರಂದು ಬೆಳಿಗ್ಗೆ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 45 ವರ್ಷ ವಯಸ್ಸಾಗಿತ್ತು.

ಜಾಲ್ಸೂರು ಬಿ.ಎಂ.ಎಸ್. ಅಟೋ ಚಾಲಕ – ಮಾಲಕ ಸಂಘದ ಸದಸ್ಯರಾಗಿದ್ದ ದಿನೇಶ್ ಅವರು ಅಸೌಖ್ಯದಿಂದಾಗಿ ಜು.2ರಂದು ರಾತ್ರಿ ಸುಳ್ಯದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜು.3ರಂದು ಬೆಳಿಗ್ಗೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.
ಮೃತರು ತಾಯಿ ನೀಲಾವತಿ , ಪತ್ನಿ ಮಾಲತಿ , ಇಬ್ಬರು ಗಂಡು ಮಕ್ಕಳು ಸೇರಿದಂತೆ ಕುಟುಂಬಸ್ಥರನ್ನು ಅಗಲಿದ್ದಾರೆ.