ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆಯಲ್ಲಿ ಬಸ್ ಸಂಚಾರ ಪುನರಾರಂಭ

0

ಸುಳ್ಯದಿಂದ ಕಲ್ಲಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ವಿಪರೀತ ಮಳೆಯ ಕಾರಣಕ್ಕೆ
ಜು.19 ರಂದು ಗುಡ್ಡ ಜರಿದು ರಸ್ತೆ ಮೇಲೆ ಮಣ್ಣು ಕುಸಿದು ಸಂಚಾರಕ್ಕೆ ಅಡಚಣೆ ಯಾಗಿತ್ತು.


ಸ್ಥಳೀಯ ಪನತ್ತಡಿ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಮಣ್ಣು ತೆರವುಗೊಳಿಸಿ ಸಂಜೆಯ ವೇಳೆಗೆ ಲಘು ವಾಹನ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು. ಬಳಿಕ ಜೆ.ಸಿ.ಬಿ.ಬಳಸಿ ತ್ವರಿತ ಗತಿಯಲ್ಲಿ ಮಣ್ಣು
ತೆರವುಗೊಳಿಸುವ ಮೂಲಕ ಇದೀಗ ಕೇರಳ ಸಾರಿಗೆ ಸಂಸ್ಥೆಯ ಬಸ್ಸು ಸಂಚಾರಪುನರಾರಂಭಗೊಂಡಿರುವುದಾಗಿ ತಿಳಿದು ಬಂದಿದೆ.