ಚಾಲಕ ಆನಂದ ಗೌಡ ನಾರ್ಕೋಡು (ಪರಿವಾರಕಾನ) ನಿಧನ

0

ಸುಳ್ಯ ಕಸಬಾದ ಪರಿವಾರಕಾನ ನಿವಾಸಿ ಆನಂದ ಗೌಡ ನಾರ್ಕೋಡು ರವರು ಅಲ್ಪ ಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸುಳ್ಯದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಅವರಿಗೆ 65 ವರ್ಷ ವಯಸ್ಸಾಗಿತ್ತು.

ಅವರಿಗೆ ಕಳೆದ ವಾರದಲ್ಲಿ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರಿನ ಕೆ.ಎಂ.ಸಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದ್ದು ಸುಳ್ಯಕ್ಕೆ ಕರೆ ತರಲಾಗಿತ್ತು. ಮನೆಯಲ್ಲಿ ಇರುವ ವೇಳೆಯಲ್ಲಿ ಮತ್ತೆ ಆರೋಗ್ಯದಲ್ಲಿ ಏರು ಪೇರಾದ್ದರಿಂದ ಸುಳ್ಯ ಕೆ.ವಿ.ಜಿ.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದಿದ್ದುದರಿಂದ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರೆಂದು ತಿಳಿದು ಬಂದಿದೆ.


ಮೃತರು ಪತ್ನಿ ಶ್ರೀಮತಿ ದಮಯಂತಿ, ಓರ್ವ ಪುತ್ರ ಸುಳ್ಯಕೆ.ಎಫ್.ಡಿ.ಸಿ.ಉದ್ಯಾನವನ ಆಸ್ಪತ್ರೆಯ ಉದ್ಯೋಗಿ ಹೇಮಂತ್ ನಾರ್ಕೋಡು,
ಸೊಸೆ ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ ಶ್ರೀಮತಿ ದಿವ್ಯಾಶ್ರೀ, ಸಹೋದರಿಯರಾದ ಶ್ರೀಮತಿ ಗೌರಮ್ಮ ಮೊರಂಗಲ್ಲು, ಶ್ರೀಮತಿ ಗಂಗಮ್ಮ ಬಂಟೋಡಿ,ಶ್ರೀಮತಿ ಮೀನಾಕ್ಷಿ ಜೋಡುಪಾಲ ಹಾಗೂ ಮೊಮ್ಮಕ್ಕಳನ್ನು, ಕುಟುಂಬಸ್ಥರನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ. ಮೃತರು ಕಳೆದ ಹಲವಾರು ವರ್ಷಗಳ ಕಾಲ ಆಲೆಟ್ಟಿ ಬಡ್ಡಡ್ಕ ರಸ್ತೆಯಲ್ಲಿ ಖಾಸಗಿ ಬಸ್ಸಿನ ಚಾಲಕರಾಗಿ ಮತ್ತು ಸುಳ್ಯ ರೋಟರಿ ಶಾಲೆಯ ಬಸ್ಸಿನ ಚಾಲಕರಾಗಿ ವೃತ್ತಿ ಸೇವೆ ನಡೆಸಿದ್ದರು. ನಾಟಿ ವೈದ್ಯರಾಗಿಯೂ ಗುರುತಿಸಿಕೊಂಡಿದ್ದರು.