ಕಡಬ ಗೃಹರಕ್ಷಕ ದಳದ ಘಟಕದ ಕಛೇರಿ ಕಟ್ಟಡಕ್ಕೆ ಗುದ್ದಲಿ ಪೂಜೆ

0

ಕಡಬ ತಾಲೂಕಿನ ಗೃಹರಕ್ಷಕ ದಳ ಘಟಕ ಕಛೇರಿಗೆ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಆ. 20ರಂದು ನಡೆಯಿತು.
ಕಡಬ ಪೇಟೆಯ ದಾಮ್ರೋಡಿ ಎಂಬಲ್ಲಿ ಸರ್ವೆ ನಂಬ್ರ (209/1) 5 ಸೆನ್ಸ್ ಜಾಗ 20 ವರ್ಷಗಳ ಹಿಂದೆ ಸರಕಾರದಿಂದ ಮಂಜೂರಾಗಿದ್ದು, ಇದೀಗ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ರಾದ ಡಾ| ಮುರಲಿಮೋಹನ ಚೂಂತಾರು ಇವರ ವಿಶೇಷ ಮುತುವರ್ಜಿಯಿಂದಾಗಿ ಕರ್ನಾಟಕ ಬ್ಯಾಂಕ್ ತನ್ನ ಸಾರ್ವಜನಿಕ ಬದ್ದತಾ ನಿಧಿಯಿಂದ 10 ಲಕ್ಷಗಳನ್ನು ನೂತನ ಕಛೇರಿ ಕಟ್ಟಡಕ್ಕೆ ಅನುಧಾನ ಮಂಜೂರು ಮಾಡಿದೆ.

ಶಿಲಾನ್ಯಾಸ ಕಾರ್ಯಕ್ರಮವನ್ನು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲಿಮೋಹನ್ ನೆರವೇರಿಸಿದರು.
ಈ ಸಂದರ್ಭದಲ್ಲಿ ಜನಾರ್ಧನ ಗೌಡ ಪಣೆಮಜಲು, ಕೃಷ್ಣ ಶೆಟ್ಟಿ ನಂದುಗುರಿ, ಸತೀಶ್ ನಾಯಕ್ ಶಾರದಾಸದನ, ಗಿರೀಶ್ ಎ.ಪಿ ಆರಿಗ, ಸತೀಶ್ ನಾಯಕ್ ಮೇಗಿನ ಮನೆ, ಉಪ ತಹಶೀಲ್ದಾರ್ ಗೋಪಾಲ್, ಕಟ್ಟಡ ಗುತ್ತಿಗೆದಾರ ಪುತ್ತು ಮೇಸ್ತ್ರಿ, ಮೀರಾ ಸಾಹೆಬ್ ಕಡಬ, ಮಹಮ್ಮದ್ ಸಾಹೆಬ್ ಕಡಬ, ಕೃಷ್ಣಪ್ಪ ಮಡಿವಾಳ, ಅಸ್ರಫ್ ಸೇಡಿಗುಂಡಿ, ಕಡಬ, ಇಂಜಿನೀಯರ್ ಗಿರಿ ಕಡಬ, ಸೈಟ್ ಸೂಪರೇಜ್ ಝೀಯ ಕಡಬ, ಕಡಬ ಗೃಹರಕ್ಷಕ ದಳದ ಘಟಕಾಧಿಕಾರಿ ತೀರ್ಥೇಶ್ ಅಮೈ, ಹಿರಿಯ ಗೃಹರಕ್ಷಕರಾದ ಎಸ್.ಎಲ್ ಸುಂದರ್, ಎಸ್.ಎಲ್ ಉದಯಶಂಕರ್, ಜಯಪ್ರಕಾಶ್, ದಯಾನಂದ, ವಾಣಿ, ಹಾಗೂ ಇತರೆ 20 ಜನ ಗೃಹರಕ್ಷಕ ಗೃಹರಕ್ಷಕಿಯರು ಉಪಸ್ಥಿತರಿದ್ದರು. ಭೂಮಿ ಪೂಜೆಯ ವೈದಿಕ ವಿಧಿವಿಧಾನವನ್ನು ಪ್ರಸಾದ್ ಕೆದಿಲಾಯ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕಮಾಂಡೆಂಟ್ ಮಾತನಾಡಿ, ಇನ್ನು ಆರು ತಿಂಗಳ ಒಳಗೆ ಕಟ್ಟಡ ನಿರ್ಮಾಣವಾಗಿ ಗೃಹರಕ್ಷಕರ ಉಪಯೋಗಕ್ಕೆ ದೊರಕುವಂತಾಗಿ ಎಂದು ಶುಭ ಹಾರೈಸಿ, ಗೃಹರಕ್ಷಕರಿಗೆ ವಾರದ ಕವಾಯತು ಮತ್ತು ವಿಶ್ರಾಂತಿಗೆ ಸೂರು ಕಲ್ಪಿಸಿದ ಕರ್ನಾಟಕ ಬ್ಯಾಂಕಿಗೆ ಧನ್ಯವಾದ ಸಮರ್ಪಿಸಿದರು.