ಪಂಜ ಲಯನ್ಸ್ ಕ್ಲಬ್ ಹಾಗೂ ಜಂಟೀ ಸಂಘಗಳ ಆಶ್ರಯದಲ್ಲಿ ಸ್ವಚ್ಚತಾ ಅಭಿಯಾನ

0

ಪಂಜ ಲಯನ್ಸ್‌ ಕ್ಲಬ್, ಪಂಚಶ್ರೀ ಯುವಕ ಮಂಡಲ ಪಂಬೆತ್ತಾಡಿ, ಅಕ್ಷತಾ ಯುವತಿ ಮಂಡಲ ಪಂಬೆತ್ತಾಡಿ, ಅಮೃತ ಮಹಿಳಾ ಮಂಡಲ ಪಂಬೆತ್ತಾಡಿ, ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ ಆ. 27ರಂದು ಕರಿಕ್ಕಳ —ಕಾಂತುಕುಮೇರಿ ರಸ್ತೆಯ ಸ್ವಚ್ಛತಾ ಆಂದೋಲನ ಕಾರ್ಯಕ್ರಮವನ್ನು ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹೇಶ್ ಕುಮಾರ್ ಕರಿಕ್ಕಳ ಉದ್ಘಾಟಿಸಿದರು.

ಲಯನ್ಸ್ ಕ್ಲಬ್ ಪಂಜ ಇದರ ಅಧ್ಯಕ್ಷರಾದ ಲl ದಿಲೀಪ್ ಬಾಬ್ಲುಬೆಟ್ಟು ಸಭಾಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಜಿತ್ ಭಟ್ ಪಂಜ ಬೀಡು, ಪಂಚಶ್ರೀ ಯುವಕ ಮಂಡಲದ ಅಧ್ಯಕ್ಷ ನಾಗಪ್ಪ ಗೌಡ , ಅಕ್ಷತಾ ಯುವತಿ ಮಂಡಲದ ಅಧ್ಯಕ್ಷೆ ಶ್ವೇತಾ ಪಂಜದ ಬೈಲು, ಹಾಗೂ ಮಹಿಳಾ ಮಂಡಲದ ಅಧ್ಯಕ್ಷ ಶ್ರೀಮತಿ ಅನಿತಾ ಕುಲದೀಪ್, ಕಾರ್ಯಕ್ರಮದ ಸಂ ಯೋಜಕರಾದ ಶ್ರೀನಿವಾಸ ಉಪಸ್ಥಿತರಿದ್ದರು.

ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಪಂಜ ಇದರ ಕೋಶಾದಿಕಾರಿ ಲlಆನಂದ ಗೌಡ ಜಲಕದ ಹೊಳೆ, ಕಾರ್ಯದರ್ಶಿ ಲಯನ್ ವಾಸುದೇವ ಮೇಲ್ಪಾಡಿ, ಉಪಸ್ಥಿತರಿದ್ದರು, ಲಯನ್ ಕೇಶವ ಗೌಡ ಕುದ್ವ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು, ಮಹಿಳಾ ಮಂಡಲ ಪೂರ್ವಾಧ್ಯಕ್ಷೆ ರತಿದೇವಿ ಜಾಕೆ ಪ್ರಾರ್ಥಿಸಿ, ಯುವಕ ಮಂಡಲದ ಕಾರ್ಯದರ್ಶಿ ನೇಮಿರಾಜ ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪಂಜ ಇದರ ಪೂರ್ವಾದ್ಯಕ್ಷರಾದ ಲಯನ್ ಮಾಧವ ಗೌಡ ಜಾಕೆ, ಲಯನ್ ಸುರೇಶ್ ಕುಮಾರ್ ನಡ್ಕ, ಲಯನ್ ಬಾಲಕೃಷ್ಣ ಗೌಡ ಮೂಲೆಮನೆ, ಹಾಗೂ ಲಯನ್ಸ್ ಕ್ಲಬ್ ಪಂಜ ಇದರ ಸದಸ್ಯರು, ಯುವಕ ಮಂಡಲ, ಯುವತಿ ಮಂಡಲ, ಮಹಿಳಾ ಮಂಡಲಗಳ ಎಲ್ಲಾ ಸದಸ್ಯರು,ಪದಾಧಿಕಾರಿಗಳು ಉಪಸ್ಥಿತರಿದ್ದರು.