ಭಾರತೀಯ ತೀಯ ಸಮಾಜ ಬಾಂಧವರ ಓಣಂ ಆಚರಣೆಗೆ ಚಾಲನೆ

0

ಸುಳ್ಯ ಭಾರತೀಯ ತೀಯ ಸಮಾಜ ಬಾಂಧವರ ನಗರ ಸಮಿತಿ ಹಾಗೂ ಗ್ರಾಮ ಸಮಿತಿಯ ಆಶ್ರಯದಲ್ಲಿ ಓಣಂ ಆಚರಣೆಯು ಇಂದು ಸುಳ್ಯ ಅಂಬಟೆಡ್ಕ ಗಿರಿದರ್ಶಿನಿ ಮರಾಠಿ ಸಮಾಜ ಮಂದಿರದಲ್ಲಿ ನಡೆಯಿತು. ಬೆಳಗ್ಗೆ ಓಣಂ ಆಚರಣೆಯ ಉದ್ಘಾಟನಾ ಸಮಾರಂಭವು ವಲಯ ಸಮಿತಿ ಅಧ್ಯಕ್ಷ ಪವಿತ್ರನ್ ಗುಂಡ್ಯ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯರಾದ ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಕುಂಞಕಣ್ಣನ್ ಕಲ್ಲುಮುಟ್ಲು, ಶ್ರೀಮತಿ ಸುಂದರಿ ಚಂದ್ರನ್ ಪರಿವಾರಕಾನ ದೀಪ ಬೆಳಗಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ನಿವೃತ್ತ ಸೈನಿಕ ಚಂದ್ರಹಾಸ ಕುತ್ತಮೊಟ್ಟೆ, ಸಮಿತಿ ಕಾರ್ಯದರ್ಶಿ ರಾಜೇಶ್ ಕುತ್ತಮೊಟ್ಟೆ, ಖಜಾಂಜಿ , ಸುನಿಲ್ ಕುಮಾರ್ ಪರಿವಾರಕಾನ ಉಪಸ್ಥಿತರಿದ್ದರು.
ಶ್ರೀಮತಿ ಸ್ವಪ್ನಾ ಪವಿತ್ರನ್ ಪ್ರಾರ್ಥಿಸಿದರು. ಶಿಕ್ಷಕಿ ಶ್ರೀಮತಿ ವಿಜಯಲಕ್ಷ್ಮಿ ಸ್ವಾಗತಿಸಿದರು. ನಿವೃತ್ತ ಎ.ಎಸ್.ಐ ಭಾಸ್ಕರ ಅಡ್ಕಾರ್ ಕಾರ್ಯಕ್ರಮ ನಿರೂಪಿಸಿದರು.

ಸಮಾಜ ಬಾಂಧವರಿಗಾಗಿ ಪೂಕಳಂ ಬಿಡಿಸುವ ಸ್ಪರ್ಧೆ ಹಾಗೂ ಮಕ್ಕಳಿಗೆ ಮಹಿಳೆಯರಿಗೆ ಮತ್ತು ಪುರುಷರಿಗೆ ವಿವಿಧ ಸ್ಪರ್ಧೆ ಗಳನ್ನು ಏರ್ಪಡಿಸಲಾಯಿತು. ತಾಲೂಕಿನ ವಿವಿಧ ಕಡೆಗಳಿಂದ ಸಮಾಜ ಬಾಂಧವರು ಆಗಮಿಸಿ ಪಾಲ್ಗೊಂಡರು.