ಸುದ್ದಿ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೆ ಸುಬ್ರಹ್ಮಣ್ಯದ ಕುಕ್ಕೇಶ್ರೀ ಟ್ಯಾಕ್ಸಿ ಚಾಲಕರ ಮಾಲಕರ ಸಂಘದಿಂದ‌ ಬೆಂಬಲ

0

ಸುದ್ದಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಯು.ಪಿ. ಶಿವಾನಂದರ ಮುಂದಾಳತ್ವದ ಸುದ್ದಿ ಜನಾಂದೋಲನ ಆಶ್ರಯದಲ್ಲಿ ನಡೆಯುತ್ತಿರುವ ಲಂಚ ಭ್ರಷ್ಟಾಚಾರ ವಿರೋಧಿ ಆಂದೋಲನದ ಬ್ಯಾನರನ್ನು ಸುಬ್ರಹ್ಮಣ್ಯದ ಕುಕ್ಕೇಶ್ರೀ ಟ್ಯಾಕ್ಸಿ ಚಾಲಕರ ಮಾಲಕರ ಸಂಘದ ಸದಸ್ಯರು ಅನಾವರಣಗೊಳಿಸಿ, ಆಂದೋಲನಕ್ಕೆ ಬೆಂಬಲ ಸೂಚಿಸಿದರು.

ಸುದ್ದಿ ವರದಿಗಾರ ಈಶ್ವರ ವಾರಣಾಶಿ ಫಲಕ ಹಸ್ತಾಂತರಿಸಿದರು. ಟ್ಯಾಕ್ಸಿ ಚಾಲಕ ಮಾಲಕರಾದ ದಿನೇಶ್ ಕಲ್ಲೇರಿ, ಕುಸುಮಧರ ಆರಾಧನ, ಸುದರ್ಶನ್ ಗೌಡ, ಪ್ರಕಾಶ್ ಕಲ್ಲಡ್ಕ, ಲಕ್ಷ್ಮೀಶ ಟಿ.ಟಿ, ಚೇತನ್ ಕಲ್ಮಕಾರು, ಭರತ್, ಪ್ರಸಾದ್, ವಿನಯ ಕಲ್ಲಾಜೆ, ರಾಕೇಶ್, ಸಚಿನ್ ಬಲ್ಯ ಮತ್ತಿತರರು ಫಲಕ‌ ಸ್ವೀಕರಿಸಿದರು. ಸುದ್ದಿ ಮಾಹಿತಿ ವಿಭಾಗದ ಮುಖ್ಯಸ್ಥರಾದ ಕೃಷ್ಣ ಬೆಟ್ಟ,

ಸುದ್ದಿ ಕಂಪ್ಯೂಟರ್ ಸಿಬ್ಬಂದಿ ವಿನಯ್ ಕಲ್ಮಡ್ಕ, ಸುದ್ದಿ ಶಿಕ್ಷಣ ವಿಭಾಗದ ಮುಖ್ಯಸ್ಥ ವಿನಯ್‌ ಜಾಲ್ಸೂರು, ಸುದ್ದಿ ಕೃಷಿ ಕೇಂದ್ರದ ಮುಖ್ಯಸ್ಥೆ ರಮ್ಯಾ ಸತಿಶ್ ಕಳಂಜ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.