ಕನಕಮಜಲು : ಕಾಲುಬಾಯಿ ರೋಗ ಲಸಿಕೆ ಕಾರ್ಯಕ್ರಮ

0

ಕನಕಮಜಲು ಗ್ರಾಮದಲ್ಲಿ ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಹಾಗೂ ಕನಕಮಜಲು ಹಾಲು ಉತ್ಪಾದಕರ ಸಹಕಾರಿ ಸಂಘ ಇದರ ಸಂಯುಕ್ತ ಆಶ್ರಯದಲ್ಲಿ 4 ನೇ ಸುತ್ತಿನ ಕಾಲುಬಾಯಿ ರೋಗ ಲಸಿಕೆ ಗೆ ಕನಕಮಜಲು ಗ್ರಾಮ ಪಂಚಾಯತ್ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಕನಕಮಜಲು ಕೆ ಎಮ್ ಎಫ್ ನಿರ್ದೇಶಕಿ ಶ್ರೀಮತಿ ಲೋಲಾಕ್ಷಿ ದೀಪ ಬೆಳಗುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಕನಕ ಮಜಲು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀಧರ ಕುತ್ಯಳ, ಮತ್ತು ಕೆ ಎಮ್ ಎಫ್ ನಿರ್ದೇಶಕರಾದ ಗಂಗಾಧರ ಹಾಗೂ ಈಶ್ವರ ರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಕನಕ ಮಜಲು ಕೆಎಮ್ ಎಫ್ ಅಧ್ಯಕ್ಷ ರಾಂ ಪ್ರಸಾದ್ ಭಟ್ ಜಾನುವಾರು ಗಳಿಗೆ ಲಸಿಕೆ ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀ ಕೆ .ಪುಷ್ಪರಾಜ ಶೆಟ್ಟಿ ಜಾನುವಾರು ಅಭಿವೃದ್ದಿ ಅಧಿಕಾರಿ ಸುಳ್ಯ ಹಾಗೂ ಶ್ರೀ ಮಹೇಂದ್ರ ಕಾರ್ಯದರ್ಶಿ ಕೆ ಎಮ್ ಎಫ್ ಕನಕಮಜಲು ರವರು ಜಾನುವಾರುಗಳಿಗೆ ಲಸಿಕೆ ಮಾಡಿದರು.