ಕೊಡಿಯಾಲದ ಹರೀಶ್‌ರವರ ಚೊಚ್ಚಲ ಕೃತಿ ಪ್ರಶಸ್ತಿಗೆ ಆಯ್ಕೆ

0

ಯುವ ಬರಹಗಾರ ಹಾಗೂ ಅ ಖಿಗಿ ಕನ್ನಡ ವಾಹಿನಿಯ ವರದಿಗಾರ ಹರೀಶ್ ಪುತ್ತೂರುರವರ ಚೊಚ್ಚಲ ಕೃತಿ ‘ಸಂಪಿಗೆಯಲ್ಲಿ ಅರಳಿದ ಚಂದ್ರಬಿಂಬ” ಎಂಬ ಕೃತಿ ಪ್ರಶಸ್ತಿ ಗೆ ಆಯ್ಕೆಯಾಗಿದೆ.

ನವಂಬರ್ ೧೮ರಂದು ಹಂಪಿಯಲ್ಲಿ ಗುರುಕುಲ ಕಲಾ ಪ್ರತಿಷ್ಠಾನ ರಿ. ಕೇಂದ್ರ ಸಮಿತಿ ತುಮಕೂರು ಇದರ ಸುವರ್ಣ ಕರ್ನಾಟಕ ಸಂಭ್ರಮದ ಸವಿನೆನಪಿಗಾಗಿ ನಡೆಯಲಿರುವ ಅಖಿಲ ಭಾರತ ೩ನೇ ಗುರುಕುಲ ಕಲಾ ಸಮ್ಮೇಳನ ಕಾರ್ಯಕ್ರಮದಲ್ಲಿ
“ಗುರುಕುಲ ಸಾಹಿತ್ಯ ಕೇಶರಿ” ಪುಸ್ತಕ ಪ್ರಕಟಿತ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.

ಹರೀಶ್‌ರವರು ಕೊಡಿಯಾಲ ಗ್ರಾಮದ ನಿವಾಸಿ ಎಚ್.ಆರ್. ಬಾಬು ಮತ್ತು ಕಮಲ ದಂಪತಿಯ ಪುತ್ರ.