ಸಂಪ್ಯಾಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಸಂಪ್ಯಾಡಿ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ. 17ರಂದು ಆಚರಿಸಲಾಯಿತು. ಅತಿಥಿಗಳಾಗಿ ಸುಬ್ರಹ್ಮಣ್ಯ ಆರೋಗ್ಯ ಇಲಾಖೆಯ ಆರೋಗ್ಯ ಶುಶ್ರೂಷಕಿ ಶ್ರೀಮತಿ ಸುಮಾ ಕಾಂಜಿ, ಸಂಪ್ಯಾಡಿ ಶಾಲಾ ಎಸ್.ಡಿ.ಎಂ ಅಧ್ಯಕ್ಷರಾದ ದೇವಿಪ್ರಸಾದ್ ನಡುಮನೆ, ಜಯಂತಕುಮಾರ್ ಕೊಠಾರಿ ಹಾಗೂ ಚಾರ್ವಿ.ಕೆ.ಕೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಬಾಲವಿಕಾಸ ಸಮಿತಿ ಅಧ್ಯಕ್ಷೆ ಶ್ರೀಮತಿ ವನಜ ಬಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕು. ಡಿಶಾ, ಕು. ಕುಶಾನಿ, ಕು. ಚಾರ್ವಿ .ಕೆ.ಕೆ, ಕು. ಜಶ್ನಿ, ಕು. ಮೈಥಿಲಿ ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಅಂಗನವಾಡಿಗೆ ಕವಿತಾ ರಮೇಶ್ ರೈ ಬೇಂಗನಡ್ಕ ದಂಪತಿಯ ಪುತ್ರ ಶಣವ್ ಕುಕ್ಕರ್, ಕವಿತಾ ದೇವಿಪ್ರಸಾದ್ ನಡುಮನೆ ದಂಪತಿಯ ಪುತ್ರಿ ದಿಶಾ ಗಡಿಯಾರ, ಕವಿತಾ ಆನಂದ ದಂಪತಿಯ ಪುತ್ರಿ ಕಾಲುದೀಪ, ವನಜ ನೀಲಪ್ಪ ಬೀದಿಗುಡ್ಡೆ ಇವರ ಪುತ್ರ ವಿಹಾನ್ ಪಾತ್ರೆ, ವಿದ್ಯಾ ಕೇಶವ ಕೊಠಾರಿ ದಂಪತಿಯ ಪುತ್ರಿ ಚಾರ್ವಿ ಕೆ.ಕೆ ಮಡಿಕೆಯನ್ನು ಕೊಡುಗೆಯಾಗಿ ನೀಡಿದರು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಈ ಸಂದರ್ಭದಲ್ಲಿ ಪೋಷಕರು, ಸ್ತ್ರೀಶಕ್ತಿ ಸದಸ್ಯರುಗಳು, ಅಂಗನವಾಡಿ ಸಹಾಯಕಿ ಮೋಹಿನಿ ವಿ.ಎಸ್ ಉಪಸ್ಥಿತರಿದ್ದರು. ಶ್ರೀಮತಿ ರಮಾ. ಕೆ ಆಶಾ ಕಾರ್ಯಕರ್ತೆ ಸ್ವಾಗತಿಸಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಯಮುನಾ ಕೆ ವಂದಿಸಿದರು.