ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯ ಜಾನಿ ಕೆ.ಪಿ.ಯವರಿಂದ ಜಿಲ್ಲೆಯ ವಿವಿಧ ಕಾರ್ಮಿಕ ಅಧಿಕಾರಿಗಳ ಭೇಟಿ

0

ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಡಳಿತ ಮಂಡಳಿ ಸದಸ್ಯ ಜಾನಿ ಕೆ.ಪಿ. ಅವರು ದ.ಕ ಜಿಲ್ಲೆಯ ಅಸಿಸ್ಟೆಂಟ್ ಲೇಬರ್ ಕಮಿಷನರ್ (ALC) ನಝಿಯಾ ಸುಲ್ತಾನ್ ಮತ್ತು ಜಿಲ್ಲಾ ಲೇಬರ್ ಆಫೀಸರ್ ಗಳಾದ ವಿಲ್ಮಾ ಮತ್ತು ಕುಮಾರ್ ಅವರನ್ನು ಭೇಟಿ ಮಾಡಿ ಜಿಲ್ಲೆಯ ಕಾರ್ಮಿಕರ ವಿವಿಧ ಸಮಸ್ಯೆಗಳು ಮತ್ತು ಮಂಡಳಿಯಿಂದ ದೊರಕಬೇಕಾದ ಸಹಕಾರದ ಬಗ್ಗೆ ಚರ್ಚಿಸಿದರು .

ಈ ಸಂದರ್ಭದಲ್ಲಿ ಸಂಪಾಜೆಯ ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಹಮ್ಮದ್ ಕುಂಞಿ ಗೂನಡ್ಕ ಮತ್ತು ಸಂವಿಧಾನ ಬದ್ದ ಸಮಾನ ಮನಸ್ಕ ಬಳಗದ ಸಂಚಾಲಕರಾದ ಇಬ್ರಾಹಿಂ ಎ.ಕೆ ಇವರು ಉಪಸ್ಥಿತರಿದ್ದರು.