ಮಾಣಿ ನೇರಳಕಟ್ಟೆ ಜನಪ್ರಿಯ ಗಾರ್ಡನ್ನಲ್ಲಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ದ.ಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ದ.ಕ ಸಹಯೋಗದಲ್ಲಿ ಎಸ್ಡಿಎಂಸಿಯ 21ನೇ ವರ್ಷಾಚರಣೆಯ ಪ್ರಯುಕ್ತ ಜಿಲ್ಲಾ ಮಟ್ಟದ ಕ್ರಿಯಾಶೀಲ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಗೆ ಅಭಿನಂದನಾ ಕಾರ್ಯಕ್ರಮ ಫೆ.28 ರಂದು ನಡೆಯಿತು.
ದ.ಕ ಜಿಲ್ಲಾ ಮಟ್ಟದ ದ್ವಿತೀಯ ಸಮಾವೇಶದಲ್ಲಿ ಸ.ಹಿ.ಪ್ರಾ.ದೇವರಕಾನ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನವೀನ ಕುಮಾರ್ ಸಾರಕರೆ ಅವರು ಸನ್ಮಾನ ಸ್ವೀಕರಿಸಿದರು.
ಶಾಲೆಯಲ್ಲಿ ನಿರಂತರ ಶಾಲಾ ಎಸ್ಡಿಎಂಸಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮ, ಆರೋಗ್ಯ ಶಿಬಿರ, ಕಟ್ಟಡ ನಿರ್ಮಾಣ,ವಿದ್ಯಾರ್ಥಿಗಳಿಗೆ ನಲಿ ಕಲಿ ಕಾರ್ಯಕ್ರಮ,ಶೈಕ್ಷಣಿಕ ಚಟುವಟಿಕೆ,ಸುಂದರವಾದ ಗಾರ್ಡನ್ ನಿರ್ಮಾಣ ಮುಂತಾದ ಹಲವಾರು ಕಾರ್ಯಕ್ರಮಗಳ ಜೊತೆಗೆ ಶಾಲಾಭಿವೃದ್ಧಿಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ಹಿನ್ನಲೆಯಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಸದಸ್ಯರಾದ ಜತ್ತಪ್ಪ ಗೌಡ ಪಾರ್ಚೋಡು, ಭಾಸ್ಕರ, ಕೀಲಾಡಿ,ಧರ್ಮಪಾಲ ಪೊಯ್ಯೆಮಜಲು ಉಪಸ್ಥಿತರಿದ್ದರು.